ಹೊಸದಿಲ್ಲಿ: ದೇಶಾದ್ಯಂತ ಎಂಟು ಹೈಕೋರ್ಟ್ಗಳಲ್ಲಿ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲು ಮತ್ತು ನಾಲ್ವರು ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾಯಿಸಲು ಸುಪ್ರೀಂ ಕೋರ್ಟ್ ಶಿಫಾರಸನ್ನು ರಾಷ್ಟ್ರಪತಿ ಅನುಮೋದಿಸಿದ್ದಾರೆ.ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ (ಅಲಹಾಬಾದ್), ರಂಜಿತ್ ವಿ ಮೋರೆ (ಮೇಘಾಲಯ), ಸತೀಶ್ ಚಂದ್ರ ಶರ್ಮಾ (ತೆಲಂಗಾಣ), ಪ್ರಕಾಶ್ ಶ್ರೀವಾಸ್ತವ (ಕೋಲ್ಕತಾ), ಆರ್ ವಿ ಮಳಿಮಠ (ಮಧ್ಯ ಪ್ರದೇಶ), ರಿತುರಾಜ್ ಅಶ್ವಥಿ (ಕರ್ನಾಟಕ), ಅರವಿಂದ ಕುಮಾರ್ (ಗುಜರಾತ್), ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಹೊಸ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸಲಾಯಿತು.ತ್ರಿಪುರಾ ಮುಖ್ಯ ನ್ಯಾಯಮೂರ್ತಿ ಎಎ ಖುರೇಶಿ ಮತ್ತು ರಾಜಸ್ಥಾನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ ಒಬ್ಬರನ್ನೊಬ್ಬರು ಬದಲಾಯಿಸಿದ್ದಾರೆ.
ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ ಅವರನ್ನು ಮಧ್ಯಪ್ರದೇಶದಿಂದ ಹಿಮಾಚಲ ಪ್ರದೇಶಕ್ಕೆ, ನ್ಯಾಯಮೂರ್ತಿ ಬಿಶ್ವನಾಥ ಸೋಮಠರ್ ಅವರನ್ನು ಮೇಘಾಲಯದಿಂದ ಸಿಕ್ಕಿಂಗೆ ಮತ್ತು ನ್ಯಾಯಮೂರ್ತಿ ಎಕೆ ಗೋಸ್ವಾಮಿ ಅವರನ್ನು ಆಂಧ್ರಪ್ರದೇಶದಿಂದ ಛತ್ತೀಸ್ಗದಡ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು.
12 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಅನುಮೋದನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.