ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂಟೌ ನಲ್ಲಿ ಬಾಲ್ಯವಿವಾಹದ ಆರೋಪದ ಮೇಲೆ 14 ವರ್ಷದ ಬಾಲಕಿಯ 46 ವರ್ಷದ ಪತಿ ಮತ್ತು ಪೋಷಕರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶಾಲೆಯಿಂದ ಹೊರಗುಳಿದಿರುವ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಕಸ್ಟಡಿಗೆ ಒಪ್ಪಿಸಲಾಗಿದ್ದು, ಪ್ರಸ್ತುತ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಮಹಿಳೆ ಸರ್ಕಾರಿ ಆಶ್ರಯತಾಣದಲ್ಲಿ ಇರಿಸಲಾಗಿದೆ.
ಆರೋಪಿಯನ್ನು ಚಿಕ್ಕಬೆಟ್ಟಹಳ್ಳಿಯ ಎನ್.ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಬಾಲಕಿಯ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಆರೋಪಿ ಗುರುಪ್ರಸಾದ್ ಬಾಲಕಿಯ ಪೋಷಕರಿಗೆ ಹಣದ ಆಮಿಷವೊಡ್ಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ತಾನು 46 ವರ್ಷದ ವ್ಯಕ್ತಿಯನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿರುವುದಾಗಿ ಬಾಲಕಿ ಅವನಿಗೆ ತಿಳಿಸಿದ್ದಳು. ನಂತರ ಪಿಜಿಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು.
ಗುರುಪ್ರಸಾದ್ ಅವರ ಪತ್ನಿ ವರ್ಷಗಳ ಹಿಂದೆ ಅವರನ್ನು ತೊರೆದಿದ್ದರು ಮತ್ತು ಅವರಿಗೆ ಮಕ್ಕಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯನ್ನು ಮತ್ತು ಅವಳ ಬಡ ಕುಟುಂಬದ ದುಃಸ್ಥಿತಿಯನ್ನು ನೋಡಿದ ನಂತರ, ಅವನು ವಯಸ್ಸಾದ ಮಹಿಳೆಯ ಮೂಲಕ ಪೋಷಕರನ್ನು ಸಂಪರ್ಕಿಸಿದನು.
ತಮಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಮತ್ತು ಬಡತನವು ತಮ್ಮ 14 ವರ್ಷದ ಮಗುವನ್ನು 46 ವರ್ಷದ ವ್ಯಕ್ತಿಗೆ ಮದುವೆಯಾಗುವಂತೆ ಮಾಡಿತು ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.