ಬೆಂಗಳೂರು: ಬಿಎಂಟಿಸಿ ನೌಕರ ಬಸಪ್ಪ ಆತ್ಮಹತ್ಯೆಗೆ ಕಾರಣವಾದ ಚನ್ನಸಂದ್ರ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ್ ಅಮಾನತು ಮಾಡಿರುವುದು ಸ್ವಾಗತಾರ್ಹ. ಬಿಎಂಟಿಸಿ ನೌಕರರ ಸತತವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಆಮ್ ಆದ್ಮಿ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಆಪ್ ಬೆಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಇಂದು ಚನ್ನಸಂದ್ರ ಡಿಪೋ ಬಳಿ ಸಿಹಿ ಹಂಚಿ ಮಾತನಾಡಿದರು, ಬಿಎಂಟಿಸಿ ನೌಕರ ಒಳೆ ಬಸಪ್ಪ ಆತ್ಮಹತ್ಯೆಗೆ ಕಾರಣವಾದ ಚನ್ನಸಂದ್ರ ಡಿಪೋ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅಮಾನತು ಮಾಡಿರುವ ವಿಚಾರ ಸ್ವಾಗತಾರ್ಹವಾದುದು. ಇದಕ್ಕಾಗಿ ಆಮ್ ಆದ್ಮಿ ಪಕ್ಷ ಚನ್ನಸಂದ್ರ ಡಿಪೋ ಬಳಿ ಪಾರ್ಥೀವ ಶರೀರದ ಮುಂದೆ ಅಹರ್ನಿಶಿ ಸತ್ಯಾಗ್ರಹ ಹೋರಾಟವನ್ನು ನಡೆಸಿತ್ತು. ಇದರ ಫಲಶ್ರುತಿಯಾಗಿ ಸಾರಿಗೆ ಇಲಾಖೆ ಇಂದು ಎಲ್ಲ ಡಿಪೋ ಮ್ಯಾನೇಜರ್ ಗಳ ಮೇಲೆ ತನಿಖೆಗೆ ಆಗ್ರಹಿಸಿದೆ. ಆಮ್ ಆದ್ಮಿ ಪಕ್ಷದ ಸತತ ಹೋರಾಟ ಫಲವಾಗಿ ಈ ಜಯ ಸಿಕ್ಕಿದೆ ಎಂದರು.
ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, ಡಿಪೋ ಮ್ಯಾನೇಜರ್ ಅಮಾನತು ಮಾಡುವ ಮೂಲಕ ಸರಕಾರ ಡಿಪೋಗಳಲ್ಲಿ ನೌಕರರ ಮೇಲೆ ಅನ್ಯಾಯವಾಗುತ್ತಿರುವುದನ್ನು ಒಪ್ಪಿಕೊಂಡಿದೆ. ದುಬಾರಿಯಾಗುತ್ತಿರುವ ಜೀವನಾವಶ್ಯಕ ವಸ್ತುಗಳ ಮಧ್ಯೆ ವೇತನ ಹೆಚ್ಚಇಲ್ಲದೇ ನೌಕರರು ಪರಿತಪಿಸುತ್ತಿದ್ದಾರೆ.
ಕಡಿಮೆ ವೇತನದಲ್ಲೂ ಕಿರುಕುಳ, ದೌರ್ಜನ್ಯ ತಡೆದುಕೊಂಡು ನೌಕರರು ಕುಟುಂಬವನ್ನು ಪೋಷಿಸುತ್ತಿದ್ದಾರೆನೌಕರ ಆತ್ಮಹತ್ಯೆ ಮಾಡಿಕೊಂಡ ಸಂಧರ್ಭದಲ್ಲಿ ಭೇಟಿ ನೀಡದೇ ಸಾರಿಗೆ ಸಚಿವರು ದರ್ಪ ತೋರಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.ಮುಂದಿನ ದಿನಗಳಲ್ಲಿ ಯಾವುದೇ ನೌಕರರ ವಿರುದ್ದ ದೌರ್ಜನ್ಯ ನಡೆದಲ್ಲಿ ಆಮ್ ಆದ್ಮಿ ಪಕ್ಷ ಉಗ್ರ ಹೋರಾಟವನ್ನು ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಸಮಯದಲ್ಲಿ ಆಪ್ನ ಇನ್ನಿತರ ಸಾರಿಗೆ ಮುಖಂಡರುಗಳ ಜೊತೆ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.