ಬೆಂಗಳೂರು: ಖಾಲಿ ಜಾಗದಲ್ಲಿ ಕಸ ಇಟ್ಟು ಹೋಗುತ್ತಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಕಿರುತೆರೆ ನಟ ಚರಿತ್ ಬಾಳಪ್ಪ ಅವರು ಅನ್ನಪೂರ್ಣೇಶ್ವರಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಘಟನೆಯು ಅನ್ನಪೂರ್ಣೇಶ್ವರಿ ನಗರದ ಡಿ- ಗ್ರೂಪ್ ಲೇಔಟ್ ಬಳಿ ನಡೆದಿದೆ.
ಕಿರುತೆರೆ ನಟ ಚರಿತ್ ಬಾಳಪ್ಪ ಅವರು ಶೂಟಿಂಗ್ಗೆ ಹೋಗುವ ಸಂದರ್ಭದಲ್ಲಿ ಕಸವನ್ನ ಹೊರಗಡೆಯ ಖಾಲಿ ಜಾಗದಲ್ಲಿ ಇಟ್ಟು ಹೋಗುತ್ತಿದ್ದರು.ಈ ವೇಳೆ ಪಕ್ಕದ ಮನೆಯವರು ಪ್ರಶ್ನೆ ಮಾಡಿದ್ದಾರೆ.ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ, ನನ್ನ ಕಿರು ಬೆರಳಿಗೆ ಗಾಯ ಮಾಡಿದ್ದಾರೆಂದು ನಟ ದೂರಿನಲ್ಲಿ ತಿಳಿಸಿದ್ದಾರೆ.