ಧಾರವಾಡ : ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ರಾಜ್ಯ ಸರ್ಕಾರ ನಡೆ ಖಂಡಿಸಿ ಧಾರವಾಡದಲ್ಲಿ ವಿಶ್ವ ಹಿಂದೂ ಪರಷದ್, ಬಜರಂಗದಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಭಾರತ ಹಿಂದೂಗಳ ರಾಷ್ಟ್ರ ಇಲ್ಲಿ ಹಿಂದೂಗಳ ಜೊತೆ ಅನ್ಯ ಧರ್ಮಿಯವರು ಇದ್ದಾರೆ.ಅವರ ಜೊತೆ ಹಿಂದೂಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ.ಕೆಲವು ದುಷ್ಟ ಶಕ್ತಿಗಳು ಹಿಂದೂಗಳಿಗೆ ಆಸೆ ಆಮೇಶಗಳ ಮೂಲಕ ಮತಾಂತರ ಮಾಡುತ್ತಿದ್ದಾರೆ.ಬಲವಂತ ಹಾಗೂ ಆಮೇಶಗಳ ಮೂಲಕ ನಡೆಯು ಮತಾಂತರವನ್ನು ನಾವು ಖಂಡಿಸುತ್ತೇವೆ.ಬಲವಂತದ ಮತಾಂತರ ತಡೆಯು ಕಾಯ್ದೆಯನ್ನು ಸರ್ಕಾರ ಹಿಂಪಡೆಯುತ್ತಿರುವುದು ಸರಿಯಲ್ಲ.ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು.ಒಂದು ವೇಳೆ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟಕ್ಕೆ ನಾವು ಮುಂದಾಗುತ್ತೆ ಎಂದು ಎಚ್ಚರಿಕೆ ನೀಡಿದರು.