ಉಡುಪಿ: ಅಮಟೋಲ್ ಸಂಸ್ಥೆೆ ವತಿಯಿಂದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಶಾಂಪಿಯನ್ಶಿಪ್ ನಗರದ ಕೃಷ್ಣಮಠದ ರಾಜಾಂಗಣದಲ್ಲಿ ಜುಲೈ 15 ಮತ್ತು 16ರಂದು ನಡೆಯಲಿದೆ ಎಂದು ಅಬಾಕ್ ಎಂಟರ್ಟೈನ್ಮೆಂಟ್ ಸಂಸ್ಥೆೆಯ ಮ್ಯಾಾನೇಜಿಂಗ್ ಡೈರೆಕ್ಟರ್ ದೇವಿಪ್ರಸಾದ್ ಆಚಾರ್ಯ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಾಂಪಿಯನ್ ಶಿಪ್ನಲ್ಲಿ ಗೋವಾ, ಕಲ್ಕತ್ತಾ, ಹೈದರಾಬಾದ್, ತಮಿಳುನಾಡು ಸಹಿತ ವಿವಿಧ ರಾಜ್ಯಗಳಿಂದ 3 ಸಾವಿರ ಕರಾಟೆಪಟುಗಳು ಭಾಗವಹಿಸಲಿದ್ದಾರೆ. 8ರಿಂದ 16ವರ್ಷದೊಳಗಿನ ವಯೋಮಿತಿಯಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಾಟೆ ಶಿಕ್ಷಕ ಜೀವನ್ ಪೂಜಾರಿ, ಪ್ರಶಾಂತ್ ಜೆ. ಆಚಾರ್ಯ ಇದ್ದರು.