ಹುಬ್ಬಳ್ಳಿ: ಇಂದು ಹಲವು ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಕೆಗೆ ತೆರಳಿದ್ದೆ. ಅಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದಾಗ ಬದಲಾವಣೆ ಆಗುತ್ತಿದೆ ಎಂಬುದ ದಿಟವಾಯಿತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಾ ಅವರು ಹೇಳಿದ ಇಂಟರ್ ಸರ್ವೇ ಪ್ರಕಾರ ಸುಮಾರು 130 ಸ್ಥಾನಗಳು ಕಾಂಗ್ರೆಸ್ ಪಾರ್ಟಿಗೆ ದೊರೆಯಲಿದೆ. ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನನ್ನ ಅನುಭವ ಪ್ರಕಾರ ನಿನ್ನೆ ಪಾಲ್ಗೊಂಡ ರ್ಯಾಲಿಯೂ ಅತ್ಯಂತ ದೊಡ್ಡ ರ್ಯಾಲಿ ಆಗಿದೆ. ಕಾಂಗ್ರೆಸ್ ಗೆ ಜನ ಬೆಂಬಲ ಜಾಸ್ತಿಯಾಗುತ್ತಿದೆ. ಶಕ್ತಿ ಕ್ರೋಡಿಕರಣ ಆಗುತ್ತಿದೆ. ಜನರ ಬೆಂಬಲದೊಂದಿಗೆ ಹೆಚ್ಚಿನ ಸೀಟ್ ಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಧಾರವಾಡ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಾರ್ಟಿ ಜಯಭೇರಿ ಬಾರಿಸುವ ಹಂತದಲ್ಲಿ ಇದೆ. ಹೆಚ್ಚು ಮತ ಅಂತರದಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದರು.