News Karnataka Kannada
Sunday, May 12 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಯಭೇರಿ – ಜಗದೀಶ ಶೆಟ್ಟರ್

Hubli: Congress is on the verge of victory in all districts - Shettar
Photo Credit : News Kannada

ಹುಬ್ಬಳ್ಳಿ: ಇಂದು ಹಲವು ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಕೆಗೆ ತೆರಳಿದ್ದೆ. ಅಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದಾಗ ಬದಲಾವಣೆ  ಆಗುತ್ತಿದೆ ಎಂಬುದ ದಿಟವಾಯಿತು ಎಂದು ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತಾ ಅವರು ಹೇಳಿದ ಇಂಟರ್ ಸರ್ವೇ ಪ್ರಕಾರ ಸುಮಾರು 130 ಸ್ಥಾನಗಳು ಕಾಂಗ್ರೆಸ್ ಪಾರ್ಟಿಗೆ ದೊರೆಯಲಿದೆ.  ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ.‌ ನನ್ನ‌ ಅನುಭವ ಪ್ರಕಾರ ನಿನ್ನೆ ಪಾಲ್ಗೊಂಡ ರ‍್ಯಾಲಿಯೂ ಅತ್ಯಂತ ದೊಡ್ಡ ರ‍್ಯಾಲಿ ಆಗಿದೆ. ಕಾಂಗ್ರೆಸ್ ಗೆ ಜನ ಬೆಂಬಲ ಜಾಸ್ತಿಯಾಗುತ್ತಿದೆ. ಶಕ್ತಿ ಕ್ರೋಡಿಕರಣ ಆಗುತ್ತಿದೆ.  ಜನರ ಬೆಂಬಲದೊಂದಿಗೆ ಹೆಚ್ಚಿನ ಸೀಟ್ ಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಧಾರವಾಡ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಾರ್ಟಿ ಜಯಭೇರಿ ಬಾರಿಸುವ ಹಂತದಲ್ಲಿ ಇದೆ.‌ ಹೆಚ್ಚು ಮತ ಅಂತರದಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ‌ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು