News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ನಾಳೆ ಬೆಳಗ್ಗೆ 11 ರವರೆಗೆ ಕಾಯುತ್ತೇನೆ ನಂತರ ತೀರ್ಮಾನ ಮಾಡುತ್ತೇನೆ- ಮಾಜಿ ಸಿಎಂ ಶೆಟ್ಟರ್

BJP's foundation is collapsing, says new MLC Jagadish Shettar
Photo Credit : News Kannada

ಹುಬ್ಬಳ್ಳಿ: ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಇಗಲೂ ಆಶಾಭಾವ ಹೊಂದಿದ್ದೇನೆ. ಇವತ್ತಿಗೆ ಎರಡು ದಿನ ಆಯ್ತು ನಾಳೆ ಘೋಷಣೆ ಆಗದೆ ಹೋದ್ರೆ ನಾನು ಯೋಚನೆ ಮಾಡ್ತೀನಿ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೆನೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಅವರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಳೆ ಮನೆಗೆ ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ, ವರಿಷ್ಠರನ್ನು ಭೇಟಿ ಮಾಡಿದ್ದು, ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ನಾಳೆ‌ 11 ವರೆಗೂ ನೋಡುತ್ತೇನೆ. ನಂತರ ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದರು.

ಎಲ್ಲರೂ ಜಗದೀಶ್ ಶೆಟ್ಟರ್ ಗೆ ಅಪಮಾನ ಆಗಿದೆ ಅಂತಿದಾರೆ. ಮೂರನೇ ಲಿಸ್ಟ್ ಗೆ ಎಲ್ಲಿವರೆಗೆ ಕಾಯ್ತೀರಿ. ಇರೋದೆ 12 ಕ್ಷೇತ್ರ.ಒಂದು ಲಿಮಿಟ್ ಇರತ್ತೆ, ನಾಳೆ ವರೆಗೂ ಹೋಪ್ಸ್ ಇದೆ.ನಾಳೆ ನೋಡಿ ತೀರ್ಮಾನ ಮಾಡ್ತೀನಿ, ನನಗೆ ಅಲ್ಲ ಇದು ಮತದಾರರಿಗೂ ಮಾಡಿದ ಅಪಮಾನ. ಇದು ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ. ರಾಜ್ಯದ ಎಲ್ಲ ಕಡೆ ಇಂದ ಕರೆ ಮಾಡುತ್ತಿದ್ದಾರೆ.  ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ, ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದು, ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿರೋದಕ್ಕೆ ಹೋಗಿದ್ದು. ನಾಳೆವರೆಗೂ ಕಾಯುತ್ತೇನೆ ಮಾಡ್ತೀನಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು