ಹುಬ್ಬಳ್ಳಿ : ಸಂವಿಧಾನ ಶಿಲ್ಪಿ,ಡಾ|| ಬಿ.ಆರ್.ಅಂಬೇಡ್ಕರ ಅವರ ನಾಮಫಲಕ ಹಾಕ್ಕಿದ್ದಕ್ಕೆ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ದೌರ್ಜನ್ಯ ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರ ತಾಲೂಕಿನ ಐಮಂಗಲ ಹೊಬಳಿಯ ಎಮ್.ಡಿ.ಕೋಟೆ ಅಡವಿರಾಮಜೋಗಿಹಳ್ಳಿ ಎಂಬ ಗ್ರಾಮದಲ್ಲಿ ಕುರಬ ಮತ್ತು ಒಕ್ಕಲಿಗ ಸಮುದಾಯದ ಸರ್ವಣೀಯರು ದಲಿತ ಕಾಲೋನಿಗೆ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ|| ಬಿ.ಆರ್.ಅಂಬೇಡ್ಕರ ರವರ ನಾಮಫಲಕವನ್ನು ಹಾಕ್ಕಿದ್ದಕ್ಕೆ ಸಹಿಸಿಕೊಳ್ಳದ ಮನುವಾದಿಗಳು, ಜಾತಿವಾದಿಗಳು, ದಲಿತರ ಮೇಲೆ ತಮ್ಮ ಕ್ರೌರ್ಯ ತೋರಿ ದಲಿತ ಕೇರಿಗೆ ನುಗ್ಗಿ ಬಡಿಗೆ ಮತ್ತು ಮಾರಕಾಸ್ತ್ರಗಳಿಂದ ಮಾರಣಾಂತಿ ಹಲ್ಲೆ ಮಾಡಲಾಗಿದೆ.
20ಕ್ಕೂ ಹೆಚ್ಚು ಜನ ಮಹಿಳೆರು 6 ಜನ ಯುವಕರನ್ನು ಗಾಸಿಗೊಳಿಸಿ ಜೀವ ಹೋಗುವ ಹಾಗೆ ಹೊಡೆದಿದ್ದಾರೆ. ಇಷ್ಟೇಲ್ಲಾ ಆದರೂ ಕೂಡಾ ನಿಮ್ಮನ್ನು ಇಷ್ಟಕ್ಕೆ ಸುಮ್ಮನೆ ಬಿಡಲ್ಲಾ ನಿಮ್ಮನು ಊರು ಬಿಡುಸುತ್ತೇವೆ. ಎಂದು ಜೀವ ಬೆದರಿಕೆ ಒಡ್ಡಿದ್ದಾರೆ.ಚಿತ್ರದುರ್ಗ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ದಲಿತರಿಗೆ ರಕ್ಷಣೆ ನೀಡಿ ಸಾಮಾಜಿಕ ಕಾನೂನ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.