ಹುಬ್ಬಳ್ಳಿ: ಜೀವಂತ ಇದ್ದವರನ್ನು ಅಣಕು ಶವಯಾತ್ರೆ ಮಾಡ್ತಾರಂದ್ರೆ ಇದು ಎಷ್ಟರ ಮಟ್ಟಿಗೆ ಸರಿ. ಹೀಗೆ ಮಾಡಲು ಯಾವ ಗ್ರಂಥದಲ್ಲಿ ಬರೆದಿದೆ. ರಾಜ್ಯದ 6.5 ಕೋಟಿ ಜನರ ಮನಸ್ಸಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇದ್ದಾರೆ. ಬಿಜೆಪಿಯವರನ್ನು ರಾಜ್ಯದ ಜನಾನೇ ಖಂಡಿಸುತ್ತಾರೆಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಸ್. ಶಂಕರಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಿನ್ನೆ ದಿನದಂದು ಬಿಜೆಪಿ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಅಣುಕು ಶವಯಾತ್ರೆ ಮಾಡಿದ್ದನ್ನು ವಿರೋಧಿಸಿದ್ರು. ಹಾಗೇ ಜೀವಂತ ಇದ್ದವರನ್ನು ಶವಯಾತ್ರೆ ಮಾಡುತ್ತಾರೆ. ಹಿಂದುತ್ವ ಪಕ್ಷವಾದ ಭಾರತಿಯ ಜನತಾ ಪಾರ್ಟಿ ಇವರಿಗೆ ನಾಚಿಕೆಯಾಗಬೇಕು. ಅಣಕು ಶವಯಾತ್ರೆ ಮಾಡುವುದರಿಂದ ಯಾರದು ಮಾನ ಹಾನಿಯಾಗಿಲ್ಲ. ಬಿಜೆಪಿ ಅವರೇ ಮಾನ ಹರಾಜು ಮಾಡಿಕೊಂಡಿದ್ದಾರೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ತಕ್ಕ ಉತ್ತರ ನೀಡುತ್ತಾರೆ ಎಂದರು.