ಹುಬ್ಬಳ್ಳಿ: ಬಜರಂಗದಳದ ಕಾರ್ಯಕರ್ತನಾಗಿದ್ದಕ್ಕೆ ನನ್ನ ವಿರುದ್ಧ ನನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಕಳಿಸಿದ್ದರು. ಈಗ ಬಿಡುಗಡೆಯಾಗಿದ್ದೇನೆ. ಈ ಹಿಂದಿನ ಎಲ್ಲ ಕೇಸ್ಗಳು ಖುಲಾಸೆಯಾಗಿವೆ ಎಂದು ಕಾರಾಗೃಹದಿಂದ ಬಿಡುಗಡೆಯಾದ ಕರಸೇವಕ ಶ್ರೀಕಾಂತ್ ಪೂಜಾರಿ ಹೇಳಿದರು.
ಬಿಡುಗಡೆಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನ ಬಳಿ ಕೆಲಸ ಇದೆ ಎಂದು ಹೇಳಿ ಶುಕ್ರವಾರ ನನ್ನನ್ನು ಕರೆದುಕೊಂಡು ಹೋದರು. ಆಮೇಲೆ ನಿನ್ನ ಮೇಲೆ ಕೇಸ್ ಇದೆ ಎಂದು ಹೇಳಿ ಜೈಲಿಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಇದ್ದ ಎಲ್ಲ ಕೇಸ್ ಖುಲಾಸೆ ಆಗಿದೆ. ಹೀಗಿದ್ದರೂ ಈ ಕೇಸ್ನಲ್ಲಿ ನನ್ನನ್ನು ಬಂಧಿಸಿದ್ದಾರೆ. ಆದರೆ ಈಗ ಕೋರ್ಟ್ ತೀರ್ಪು ನೀಡಿ ಬಿಡುಗಡೆ ಮಾಡಿರುವುದು ಖುಷಿ ತಂದಿದೆ ಎಂದು ಅವರು ಶ್ರೀಕಾಂತ್ ಹೇಳಿದರು.