ಹುಬ್ಬಳ್ಳಿ: ನೇರವಾಗಿ ಜಾತಿಗೆ ಬೆಂಬಲ ಕೊಡುವುದು ಕಾಂಗ್ರೆಸ್ ನೀತಿಯಾಗಿದೆ. ಬಜರಂಗದಳ ನಿಷೇಧ ಅದರ ಹಿಂದೆ ಯಾರು ಇದ್ದಾರೆ ಎನ್ನುವುದು ಕಾಂಗ್ರೆಸ್ ನಲ್ಲಿ ಗೊಂದಲವಿದೆ. ಯಾವುದೇ ಸ್ವಾಭಿಮಾನಿ ವ್ಯಕ್ತಿ ಬಜರಂಗದಳವನ್ನು ಟೀಕೆ ಮಾಡಿಲ್ಲಾ. ದೇಶ ವನ್ನು ರಕ್ಷಣೆ ಮಾಡಿರುವ ರಾಷ್ಟ್ರವನ್ನು ನೀರ್ಮಾಣ ಮಾಡಿರುವ ಯುವಕರ ಪಡೆ ಬಜರಂಗದಳದಲ್ಲಿ ಇದೆ ಎಂದು ಮಾಚಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗದಳ ನಿಷೇಧ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿಯೇ ಗೊಂದಲವಿದೆ. ದೇಶ ರಕ್ಷಿಸೋ ಯುವಕರ ಪಡೆ ಬಜರಂಗದಳದಲ್ಲಿದೆ.ಬಜರಂಗದಳ ನಿಷೇಧಿಸುವ ಹೇಳಿಕೆ ದೊಡ್ಡ ದುರಂತ. ಹಿಂದುಗಳನ್ನು ಪಕ್ಕಕ್ಕೆ ಸರಿಸುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆದೆ. ನರೇಂದ್ರ ಮೋದಿಗೆ ವಿಷ ಸರ್ಪ ಅನ್ನುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಸುದೀರ್ಘ ರಾಜಕಾರಣ ಭಸ್ಮ ಆಗಿ ಹೋಗುತ್ತಾರೆ ಎಂದರು
ಬಜರಂಗದಳದಲ್ಲಿ ಯಾರು ಯಾರು ಇದ್ದಾರೆ ನನಗೆ ಗೊತ್ತು. ಎಲ್ಲ ರಾಷ್ಟ್ರೀಯ ವಾದಿಗಳು ಸುಮ್ಮನೆ ಕುಳಿತ್ತಿಲ್ಲಾ ಅವರು. ಹನುಮಾನ ಚಾಲೀಸ್ ನ ಎಲ್ಲಾ ಭಾಗದಲ್ಲಿ ಹೋಗಿ ಪಠಣವನ್ನು ಶಾಂತಿಯಿಂದ ಮಾಡತ್ತಾ ಇದ್ದಾರೆ. ಚುನಾವಣೆಯಲ್ಲಿ ಗೊತ್ತಾಗುತ್ತದೆ. ರಾಷ್ಟ್ರೀಯ ದ್ರೋಹಿಗಳನ್ನು ನೇರವಾಗಿ ಚುನಾವಣೆಯಲ್ಲಿ ಸೋಲಿಸುತ್ತಾರೆ ಅದರಲ್ಲಿ ಅನುಮಾನ ಬೇಡ ಎಂದರು.