ಹುಬ್ಬಳ್ಳಿ: ಈ ಬಾರಿ ಭಾರತೀಯ ಸಂಸ್ಕೃತಿಗೆ ಒತ್ತು ಕೊಡೋ ಶಾಸಕರು ಆಯ್ಕೆ ಆಗಿ ಬರ್ತಾರೆ. ಬಿಜೆಪಿಯಿಂದ ಅಂತಹ ಶಾಸಕರು ಗೆದ್ದು ಬರ್ತಾರೆ . ಈ ಭಾರಿ ಯುವಕರಿಗೆ ಹೆಚ್ಚು ಸ್ಥಾನವನ್ನು ಕೊಡಲಾಗಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶಗೋಸ್ಕರ ಈ ಸಂಸ್ಕೃತಿ, ಧರ್ಮ ವನ್ನು ಉಳಿಸಬೇಕು. ಅಂತಹ ಸ್ವತಂತ್ರ್ಯ ಪೂರ್ವದ ಸ್ವತಂತ್ರ್ಯ ಗೋಸ್ಕರ ಹೋರಾಟ ಮಾಡಿ ಮತ್ತು ಬಲಿದಾನ ಮಾಡಿ ಸ್ವರ್ಗದಲ್ಲಿ ಇರುವಂತಹ ಆತ್ಮಕ್ಕೆ ಶಾಂತಿ ಸಿಗುವಂತಹ ಒಂದು ವಿಶೇಷ ಚುನಾವಣೆ ಯಲ್ಲಿ ನಾವು ಇದ್ದೇವೆ ಎಂದರು.
ಈ ಬಾರಿ ಬಿಜೆಪಿ ಯುವಕರಿಗೆ ಟಿಕೆಟ್ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಗಾರ ಕನಸು ನನಸಾಗಲು, ಯುವಕರು ಈ ಬಾರಿ ಗೆಲ್ತಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿಯಾಗಿರೋದು ಸಂತೋಷ. ಅವರು ಗೆದ್ದು ಬರೋ ವಿಶ್ವಾಸ ಇದೆ. ಅವರಿಗೆ ಶುಭಕೋರಲು ನಾನು ಶಿವಮೊಗ್ಗದಿಂದ ಬಂದಿದ್ದೇನೆ. ಇಡೀ ಕರ್ನಾಟಕದಲ್ಲಿ ಟೆಂಗಿನಕಾಯಿ ಆಯ್ಕೆ ಬಹಳ ಪ್ರಾಮುಖ್ಯ. ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ದುರದೃಷ್ಟಕರ. ಪಾರ್ಟಿ ಬಿಟ್ಟಿರೋದಕ್ಕೆ ಕಾರ್ಯಕರ್ತರ ಆಕ್ರೋಶವೂ ಇದೆ. ಹೀಗಾಗಿ ಟೆಂಗಿನಕಾಯಿ ಗೆಲ್ತಾರೆ ಎಂದರು.