ಹುಬ್ಬಳ್ಳಿ: ನನ್ನ ಟಿಕೆಟ್ ಕೋರ್ ಕಮಿಟಿಯಲ್ಲಿ ತಪ್ಪಿಸಿದ್ದಾರೆ ಅಂತ ಹೇಳ್ತಾಇಲ್ಲಾ. ನನ್ನ ಟಿಕೆಟ್ ಯಾರು ತಪ್ಪಿಸಿದ್ದಾರೆ ಅಂತ ಗೊತ್ತಿದೆ. ಆದ್ರೆ ಹೇಳೋದಿಲ್ಲ. ಕಾಂಗ್ರೆಸ್, ಜೆಡಿಎಸ್ ನಿಂದ ಆಹ್ವಾನ ಬಂದಿದೆ. ಇವತ್ತು ಅಭಿಮಾನಗಳ ಸಭೆ ಕರೆದಿದ್ದೇನೆ. ನಾನು ಕಣದಲ್ಲಿ ಇರುವುದ ಶತಸಿದ್ದ. ಧಾರವಾಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಕುಂದಗೋಳ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾದವರನ್ನು ಯಾವ ಪರಿಸ್ಥಿತಿಗೆ ತಂದಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಬೆಳೆಬೇಕು, ಎನ್ನಾದರೂ ಆಗಬೇಕು ಅಂದ್ರೆ ಜಗದೀಶ್ ಶೆಟ್ಟರ್ ಇದ್ರೆ ಮಾತ್ರ ಸಾಧ್ಯ. ಕೋರ್ ಕಮಿಟಿ ಐತಿ ಅದರಲ್ಲಿ ಅಮೀತ್ ಶಾ, ಪ್ರಲ್ಹಾದ್ ಜೋಶಿ, ಯಡಿಯೂರಪ್ಪ, ನಡ್ಡಾ , ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಂಡಿದ್ದಾರೆ. ಒಬ್ಬರೇ ತೀರ್ಮಾನ ತೆಗೆದುಕೊಂಡಿಲ್ಲಾ ಎಂದರು.