News Karnataka Kannada
Monday, May 06 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಲೂಟಿ ಹೊಡೆದವರನ್ನು ಬಿಜೆಪಿ ರಕ್ಷಣೆ ಮಾಡೋ ಕೆಲಸ ಮಾಡ್ತಿದೆ- ಸಿದ್ದರಾಮಯ್ಯ

Hubballi: BJP working to protect looters: Siddaramaiah
Photo Credit : News Kannada

ಹುಬ್ಬಳ್ಳಿ :ಪ್ರಜಾಪ್ರಭುತ್ವದಲ್ಲಿ ಇದು ಕರಾಳ ದಿನ. ಬಿಜೆಪಿಯವರು ಬೇಕು ಅಂತಾ ಬೇರೆ ನಾಯಕರನ್ನ ಎದುರಿಸಲಾಗದೆ ಮಾಡಿರೋ ಷಡ್ಯಂತ್ರ. ಬಹಳ ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಹೋದ್ರು. ವಿಜಯ ಮಲ್ಯ, ನೀರವ ಮೋದಿ, ಇವರೆಲ್ಲ ಹೋದ್ರು ಇವರನ್ನ ಏನಂತ ಕರಿಬೇಕು ಎಂದು ರಾಹುಲ್ ಗಾಂಧಿ ಅನರ್ಹತೆ ವಿಚಾರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದರು.

ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆದೋರನ್ನ ಏನಂತ ಕರೀಬೇಕು. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇಲ್ವಾ.‌ಸತ್ಯ ಹೇಳಬೇಕಾದ ಅಗತ್ಯ ಇಲ್ವಾ. ಸತ್ಯ ಹೇಳಿದ್ರೆ ಬಿಜೆಪಿಯವರು ತಡಕೋಳೋದಿಲ್ಲ. ಸತ್ಯ ಹೇಳಬಾರದ,ಅದಕ್ಕೋಸ್ಕರ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದು ನೀಚ ಹೇಡಿತನದ ಕೆಲಸ. ಎರಡು ವರ್ಷ ಶಿಕ್ಷೆ ಆದ ನಿದರ್ಶನ ಇದೆನಾ..? ಕೋರ್ಟ್ ಆದೇಶ ಮಾಡಿದೆ,ಸರಿನೋ ತಪ್ಪೋ. ಅಪೀಲ್ ಹಾಕಬಹುದು ಅಲ್ವಾ.ರಾಹುಲ್ ಗಾಂಧಿ ಹೇಳಿರೋದು ಏನ ತಪ್ಪು. ಅವರೇನು ಮಾಹಾಪರಾಧ ಮಾಡಿದ್ದಾರೆ. ಲೂಟಿ ಹೊಡೆದವರನ್ನು ಬಿಜೆಪಿ ರಕ್ಷಣೆ ಮಾಡೋ ಕೆಲಸ ಮಾಡ್ತಿದೆ. ಅದನ್ನು ಮಾತಾಡಿದ್ರೆ ಇವರಿಗೆ ಶಿಕ್ಷೆ. ಸತ್ಯ ಹೇಳಿದವರಿಗೆ ಶಿಕ್ಷೆ ಕೊಡೋಕೆ ಹೊರಟಿರೋದು ಪ್ರಜಾಪ್ರಭುತ್ವದ ಮಾರಕ. ಇದು ವಿಪರ್ಯಾಸ ಎಂದರು.

ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೀತ್ತಿದ್ದಾರೆ, ನನ್ನ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದೀನಿ- ಸಿದ್ದರಾಮಯ್ಯ

ಹೈಕಮಾಂಡ್ ಏನು ಹೇಳ್ತಾರೆ ಅಲ್ಲಿ ನಾನು ನಿಂತುಕೊಳ್ಳುತ್ತೇನೆ. ಬಾದಾಮಿಗೆ ಅವಾಗ ಅವಾಗ ಬರ್ತಾ ಇರ್ತೀನಿ. ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೀತ್ತಿದ್ದಾರೆ. ಎಲ್ಲ ಕಡೆ ನಿಲ್ಲೋಕೆ ಆಗಲ್ಲ. ಅದಕ್ಕೆ ನಾನು ಹೈಕಮಾಂಡ್ ಗೆ ಬಿಟ್ಟಿದೀನಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಕ್ಷೇತ್ರ ಸಿಗ್ತಿಲ್ಲ ಅನ್ನೋ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿ, ಸಿಗದೆ ಇರೋ ತರಹ ಇದ್ರೆ 20 ಕಡೆ ಯಾಕೆ ಕರೀತಾರೆ. ನಂಗೆ ಯಾವದೇ ಕ್ಷೇತ್ರ ಇಲ್ಲದೆ ಇದ್ರೆ ಯಾಕೆ ಕರೀತಾರೆ ನೀವೆ ಹೇಳಿ. ಸೋಲೋರನ್ನ ಕರೀತಾರಾ, ಗೆಲ್ಲೋರನ್ನ ಕರೀತಾರಾ. ಅಭಿಮಾನ ಪ್ರೀತಿಯಿಂದ ಕರೀತಾರೆ,ಮತ್ತೆ ಕ್ಷೇತ್ರ ಇಲ್ಲ ಹೇಗೆ ಅಂತಾರೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು