News Karnataka Kannada
Tuesday, May 07 2024
ಹುಬ್ಬಳ್ಳಿ-ಧಾರವಾಡ

ಹೆಚ್ಚಿನ ಅಭಿವೃದ್ಧಿಗೆ ಒಂದು ಅವಕಾಶ ಕೊಡಿ- ಪೂರ್ವ ಕ್ಷೇತ್ರದ ಜನತೆಗೆ ದುರ್ಗಪ್ಪ ಬಿಜವಾಡ ಮನವಿ

Hubballi: Durgappa Bijawada appeals to the people of Hubballi East constituency to give them an opportunity for further development
Photo Credit : News Kannada

ಹುಬ್ಬಳ್ಳಿ: ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನಲೆಯಲ್ಲಿ, ಆಲ್ ಇಂಡಿಯಾ ಎಐಎಮ್ಐಎಮ್ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಅವರು, ಹಿಂದೂ, ಮುಸ್ಲಿಂ ಬಾಂಧವರ ಜೊತೆ ಪ್ರಚಾರ ಸಭೆ ಮಾಡುತ್ತಿದ್ದಾರೆ. ಪೂರ್ವ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕೆಂದರೆ, ನಿಮ್ಮ ಕಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕೆಂದರೆ ಈ ಬಾರಿ ಎಐಎಮ್ಐಎಮ್  ಪಕ್ಷಕ್ಕೆ ಮತ ಒಂದು ಅವಕಾಶ ಮಾಡಿಕೊಡಿ ಎಂದು ಕ್ಷೇತ್ರದ ಜನರಲ್ಲಿ ಮನವರಿಕೆ ಮಾಡುತ್ತಿದ್ದಾರೆ.

ಇನ್ನು ನಿನ್ನೆ ರಾತ್ರಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬರುವಂತಹ ಬಿರಬಂದ ಗಲ್ಲಿ, ಧಾರವಾಡ ಪ್ಲಾಟ್, ಇಬ್ರಾಹಿಮಪುರ, ಬೆಪಾರಿ ಪ್ಲಾಟ್, ಕ್ಯಾಥೋಲಿಕ್ ಚರ್ಚ್ ಮಂಟೂರ ರೋಡ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ಮತ್ತು ಪ್ರಚಾರ ಸಭೆಯನ್ನು ಹಮ್ಮಿಕೊಂಡು ಜನರಲ್ಲಿ ತಮ್ಮ ಮುಂದಿನ ಪೂರ್ವ ಕ್ಷೇತ್ರದ ಚಿತ್ರಣವನ್ನು ಬಿಚ್ವಿಟ್ಟರು, ಅಷ್ಟೇ ಅಲ್ದೆ ದುರ್ಗಪ್ಪ ಬಿಜವಾಡ ಅವರು ಹೋಗುತ್ತಿದ್ದಂತೆ ಜನರು ಕೂಡ ಆತ್ಮೀಯವಾಗಿ ಸ್ವಾಗತ ಮಾಡಿಕೊಂಡು, ಒಳ್ಳೆ ರೀತಿಯ ಸ್ಪಂದನೆ ಕೂಡ ನೀಡುತ್ತಿದ್ದಾರೆ.

ದುರ್ಗಪ್ಪ ಬಿಜವಾಡ ಅವರ ಪರವಾಗಿ ಮುಸ್ಲಿಂ ಬಾಂಧವರೇ ಪೂರ್ವ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಎಮ್ಐಎಮ್ ಪಕ್ಷದ ಕಾರ್ಯಕರ್ತರು ಕೂಡ ದುರ್ಗಪ್ಪ ಬಿಜವಾಡ ಅವರಿಗೆ ಸಾಥ್ ನೀಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು