ಹುಬ್ಬಳ್ಳಿ: ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನಲೆಯಲ್ಲಿ, ಆಲ್ ಇಂಡಿಯಾ ಎಐಎಮ್ಐಎಮ್ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಅವರು, ಹಿಂದೂ, ಮುಸ್ಲಿಂ ಬಾಂಧವರ ಜೊತೆ ಪ್ರಚಾರ ಸಭೆ ಮಾಡುತ್ತಿದ್ದಾರೆ. ಪೂರ್ವ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕೆಂದರೆ, ನಿಮ್ಮ ಕಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕೆಂದರೆ ಈ ಬಾರಿ ಎಐಎಮ್ಐಎಮ್ ಪಕ್ಷಕ್ಕೆ ಮತ ಒಂದು ಅವಕಾಶ ಮಾಡಿಕೊಡಿ ಎಂದು ಕ್ಷೇತ್ರದ ಜನರಲ್ಲಿ ಮನವರಿಕೆ ಮಾಡುತ್ತಿದ್ದಾರೆ.
ಇನ್ನು ನಿನ್ನೆ ರಾತ್ರಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬರುವಂತಹ ಬಿರಬಂದ ಗಲ್ಲಿ, ಧಾರವಾಡ ಪ್ಲಾಟ್, ಇಬ್ರಾಹಿಮಪುರ, ಬೆಪಾರಿ ಪ್ಲಾಟ್, ಕ್ಯಾಥೋಲಿಕ್ ಚರ್ಚ್ ಮಂಟೂರ ರೋಡ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ಮತ್ತು ಪ್ರಚಾರ ಸಭೆಯನ್ನು ಹಮ್ಮಿಕೊಂಡು ಜನರಲ್ಲಿ ತಮ್ಮ ಮುಂದಿನ ಪೂರ್ವ ಕ್ಷೇತ್ರದ ಚಿತ್ರಣವನ್ನು ಬಿಚ್ವಿಟ್ಟರು, ಅಷ್ಟೇ ಅಲ್ದೆ ದುರ್ಗಪ್ಪ ಬಿಜವಾಡ ಅವರು ಹೋಗುತ್ತಿದ್ದಂತೆ ಜನರು ಕೂಡ ಆತ್ಮೀಯವಾಗಿ ಸ್ವಾಗತ ಮಾಡಿಕೊಂಡು, ಒಳ್ಳೆ ರೀತಿಯ ಸ್ಪಂದನೆ ಕೂಡ ನೀಡುತ್ತಿದ್ದಾರೆ.
ದುರ್ಗಪ್ಪ ಬಿಜವಾಡ ಅವರ ಪರವಾಗಿ ಮುಸ್ಲಿಂ ಬಾಂಧವರೇ ಪೂರ್ವ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಎಮ್ಐಎಮ್ ಪಕ್ಷದ ಕಾರ್ಯಕರ್ತರು ಕೂಡ ದುರ್ಗಪ್ಪ ಬಿಜವಾಡ ಅವರಿಗೆ ಸಾಥ್ ನೀಡುತ್ತಿದ್ದಾರೆ.