ಹುಬ್ಬಳ್ಳಿ: ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಬಡವರ ಪಾಲಿನ ಆಶಾಕಿರಣ ಕಿಮ್ಸ್ ಆಸ್ಪತ್ರೆಯಲ್ಲಿ ನೆಲದ ಮೇಲೆ ಕುಳ್ಳಿರಿಸಿ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ಸದ್ಯ ಕಿಮ್ಸ್ ವೈದ್ಯರು ಬಡ ರೋಗಿ ವೃದ್ಧರಿಗೆ ಬೆಡ್ ನೀಡದೆ ಚಿಕಿತ್ಸೆ ನೀಡುತ್ತಿದ್ದಾರೆ. ದೂರದ ಊರಿನಿಂದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವೃದ್ಧರಿಗೆ, ಬೆಡ್ ನೀಡದೇ ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಲಾದ ಆರೋಪ ಕೇಳಿಬಂದಿದೆ. ಕುಂದಗೋಳ ತಾಲೂಕಿನ ಚೆನ್ನವ್ವ ಎಂಬ 67 ವರ್ಷದ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು. ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು ನೆಲದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ್ದಾರೆ. ಗ್ಲೋಕೋಸ್ ಬಾಟಲಿ ಹಾಕಲು ಸ್ಟ್ಯಾಂಡ್ ಸಹ ನೀಡಿರಲಿಲ್ಲ. ಇದರಿಂದಾಗಿ ಚೆನ್ನವ್ವ ಸಂಬಂಧಿಕರು ಬಾಟಲಿಯನ್ನು ಕೈಯಲ್ಲಿ ಹಿಡಿದು ನಿಲ್ಲಬೇಕಾಯಿತು. ಕಿಮ್ಸ್ ವೈದ್ಯರುಗಳ ಅನಾಗರಿಕ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸರ್ಕಾರ ಕಿಮ್ಸ್ ಆಸ್ಪತ್ರೆಗೆ ಇಷ್ಟೊಂದು ಸೌಲಭ್ಯಗಳನ್ನು ನೀಡುತ್ತಿದ್ದರು ಕೂಡ ಇಲ್ಲಿನ ವೈದ್ಯರು ಮಾತ್ರ ನಿರ್ಲಕ್ಷ ತೋರುತ್ತಿದ್ದಾರೆ. ಆರೋಗ್ಯ ಸಚಿವರು ಇತ್ತ ಗಮನಸಿ ವೈದ್ಯರಿಗೆ ತಿಳಿಹೇಳಬೇಕಿದೆ.