ಧಾರವಾಡ: ನಗರ ಪ್ರದಕ್ಷಿಣೆ ಹಾಗೂ ನಗರ ಸಂಕೀರ್ತನ ಹಾಗೂ ಶ್ರೀ ಪಾಂಡುರಂಗ ಜ್ಯೋತಿಯು ಸಾಗುವ ಮಾರ್ಗಸೂಚಿ ಗಾಂಧಿ ಚೌಕದಿಂದ ಹೊರಡುವ ಪಾದಯಾತ್ರೆಯು ಸುಭಾಸ ರೋಡ ಮಾರ್ಗವಾಗಿ ಸಾಗಿ ಟಿಕಾರೆ ರಸ್ತೆ ಮೂಲಕ ಸಾಗಿ ಎನ್.ಟಿ.ಟಿ.ಎಫ್. ಮಾರ್ಗವಾಗಿ ಸಾಗಿ ಟೋಲ ನಾಕಾದ ಮೂಲಕ ಧಾರವಾಡದ ಗಾಂಧಿನಗರದ ಈಶ್ವರ ದೇವಸ್ಥಾನಕ್ಕೆ ಬಂದು ಸೇರುವುದು.
ಮೊದಲೇ ಠರಾವು ಮಾಡಿದಂತೆ ಸಿದ್ದೇಶ್ವರ ನಗರದ ಶ್ರೀ ಕರಿಯಮ್ಮ ಹಾಗೂ ಶ್ರೀ ಹನುಮಂತ ದೇವರ ದೇವಸ್ಥಾನದಿಂದ ಹೊರಡುವ ಸಂತ ಹಾಗೂ ಸದ್ದಕ್ತ ಮಂಡಳಿಯ ಖಾಯಂ ಪಾದಯಾತ್ರಾ (ದಿಂಡಿ) ಸೇವಾಕರ್ತರೊಂದಿಗೆ ಸೇರಿ “ಶ್ರೀ ಪಾಂಡುರಂಗ ಶೋಭಾ ಯಾತ್ರೆ’ ಯ ಮೂಲಕ ಅಂಬೇಡ್ಕರ ನಗರ ಹಾಗೂ ಸಿ. ಎಮ್. ಡಿ. ಆರ್. ಆಫೀಸ್ ಹತ್ತಿರವಿರುವ ಜ್ಞಾನೇಶ್ವರ ನಗರದ, ಶ್ರೀ ಕಾನಡಾ ವಿಠಲ ರುಕ್ಕಿಣಿ ಮಂದಿರಕ್ಕೆ ವಿಜಯಂಗೈಯುವದು.
ಮಾರುತಿ ದೇವೇಂದ್ರಪ್ಪ ಭಿಸೆ ಅಧ್ಯಕ್ಷರು, ಶ್ರೀ ಕಾನಡಾ ವಿಠಲ ರುಕ್ಕಿಣಿ ಮಂದಿರ ಸಮಿತಿ (ರಿ) ಧಾರವಾಡ ಶೋಭಾ ಯಾತ್ರೆಯ ನೇತೃತ್ವ ವಹಿಸಿದ್ದರು, ಸುಭಾಸ ಮುರಲೀಧರ, ಜಾಧವ, ಲಕ್ಷಣ ದುರ್ಗಪ್ಪ ಕರಿಯವರ, ವಿಜಯಕುಮಾರ ಬ. ಬಿಸೆ, ಶ್ರೀ ಹರಿ ಟಿಕಾರೆ, ಮಂಜುನಾಥ ನಂದಿಕೋಲವರ, ರಾಜು ಪಿ. ಬಿಸೆ, ಫಕ್ಕೀರಪ್ಪ ಬಾದಗಿ, ಪ್ರಸಾದ ಮಾರುತಿ ಭಿಸೆ, ಶ್ರೀಕಾಂತ ಮಡಿವಾಳರ, ಶ್ರೀ ಗಾಡಗೆ ಮಹಾರಾಜರ ವಂಶಸ್ಥರು, ಯಲ್ಲಪ್ಪ ತಿಪ್ಪಣ್ಣ ಗುರು ಹಾಗೂ ಬಂಧುಗಳು, ಬಲರಾಮ ಪಾಚಂಗೆ, ಭೀಮಣ್ಣ ಗುದಗಿ, ಎಸ್. ಜಿ. ಕವಳಿಕಾಯಿ, ತಿರಕಪ್ಪ ಅಣ್ಣಿಗೇರಿ , ಆನಂದ ಸಿಂಗನಾಥ, ಪ್ರಕಾಶ ಎ, ಠಾಕೂರ, ಶ್ರೀ ರಾಮ ಪ್ರಭು ಹಾಗೂ ಅಪಾರ ಭಕ್ತರ ಸಮೂಹ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.