ಧಾರವಾಡ : ಐಐಟಿ ಉದ್ಘಾಟನೆಗೆಂದು ಧಾರವಾಡಕ್ಕೆ ಬಂದಿದ್ದ ಪ್ರಧಾನಿ ಮೋದಿ ಅವರಿಗೆ ಕಲಘಟಗಿಯ ಪ್ರತಿಷ್ಠಿತ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲಾಗಿದೆ.
ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಅರವಿಂದ ಬೆಲ್ಲದ ಅವರು ಮೋದಿ ಅವರಿಗೆ ಈ ಕಲಘಟಗಿ ಬಣ್ಣದ ತೊಟ್ಟಿಲನ್ನು ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೋದಿ ಅವರಿಗೆ ಧಾರವಾಡದ ಕಸೂತಿ ಶಾಲು ಹಾಗೂ ಧಾರವಾಡ ಪೇಡಾ ನೀಡಿ ಗೌರವಿಸಿದರು.