ಬಾಗಲಕೋಟೆ: ಕಲೆ ಅನ್ನೋದು ಯಾರ ಸೊತ್ತು ಅಲ್ಲ. ಶಿಸ್ತು, ಆಸಕ್ತಿ ಇತ್ತು ಅಂದ್ರೆ ಕಲೆಯನ್ನ ಒಲಿಸಿಕೊಳ್ಳಬಹುದು ಅನ್ನೋ ಮಾತಿದೆ. ಆದ್ರೆ ಕೆಲ ಕಲೆಗಳನ್ನ ಒಲಿಸಿಕೊಳ್ಳಲು ಅದೆಷ್ಟೋ ಮಂದಿ ಏನೇನೂ ಮಾಡಿ ಸೋತಿರುತ್ತಾರೆ. ಆದ್ರೆ ನಾವು ಇವತ್ತು ಹೇಳ್ತಿರೋದು ತನ್ನ ಕೌಶಲ್ಯದಿಂದ ಗೆದ್ದಿರುವ ಸುಪ್ರಿತ್ ಗದ್ದಗಿಮಠ್ ಅವರ ಬಗ್ಗೆ. ಇವರು ಬಾಲ್ಯದಿಂದಲೂ ಆಸಕ್ತಿ ತೋರಿದ ಈ ಮಿನೆಚೇರ್ ಕಲೆಯನ್ನು ಆರಾಮವಾಗಿ ಜೀರ್ಣಿಸಿಕೊಂಡಿದ್ದಾರೆ. ಹೌದು ಈಗ ಇವರು ಮಿನಿಚರ್ ಮಾಡಲು ಸೈ, ಚಾಲಕನಾಗಿಯೂ ಸೈ.
ಹೌದು. . ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾ| ಕೆರೂರಿನ 24 ವರ್ಷದ ಸುಪ್ರಿತ್ ಗದ್ದಗಿಮಠ್ ಅವರ ಕೈಚಳಕದಿಂದ ಬಸ್ ನ ಪ್ರತಿರೂಪ ಮೂಡಿಬಂದಿದೆ. ಈಗಾಗಲೇ ಹಲವು ಬಸ್ ಗಳ ಪ್ರತಿರೂಪ ಇವರ ಕೈಚಳಕದಿಂದ ಮೂಡಿ ಬಂದಿದೆ.
ಇವರಿಗೆ ಬಾಲ್ಯದಿಂದಲೇ ಬೇರೆ ಬೇರೆ ಮಿನಿಚರ್ ಮೇಲೆ ಕ್ರೆಜ್ ಹುಟ್ಟಿಕೊಂಡಿತ್ತು. ತಮ್ಮ ತಂದೆಯು ಬಸ್ ಫೀಲ್ಡ್ ಇದ್ದುದ್ದರಿಂದ ಈ ಕ್ರೆಜ್ ಮತ್ತಷ್ಟು ಹೆಚ್ಚಾಗಿತ್ತು. ಬಾಲ್ಯದಲ್ಲಿ ಆಟವಾಡಲು ಈ ರೀತಿಯಾಗಿ ಬಸ್ ಗಳನ್ನು ತಯಾರಿಸುತ್ತಿದ್ದರು ಸುಪ್ರಿತ್. ಬಳಿಕ ಅದುವೇ ಹವ್ಯಾಸವಾಗಿ ಮಾರ್ಪಡಾಗಿದೆ. ಇನ್ನು ಇದನ್ನು ತಯಾರಿಸಲು ಕಡಿಮೆ ಅಂದರೂ 2 ತಿಂಗಳು ಸಮಯ ತಗಲುತ್ತದೆ. ಫೋಮ್, ಮೀಟಲ್, ಅಕ್ರಿಲಿಕ್ ಹೀಗೆ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಈ ಬಸ್ ಪ್ರತಿರೂಪವನ್ನು ತಯಾರಿಸುತ್ತಿದ್ದಾರೆ.
ಪ್ರಸ್ತುತ ಸುಪ್ರಿತ್ ಅವರು ಆರ್ ಟಿ ಒ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.