ಬಾಗಲಕೋಟೆ : ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ವಿದ್ಯಾರ್ಥಿ ಗಂಗಮ್ಮ ಬಸಪ್ಪ ಹುಡೇದ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ರ್ಯಾಕ್ ಪಡೆದಿದ್ದಾಳೆ.ಆಗಿ ಹೊರಹೊಮ್ಮಿದ್ದಾಳೆ. ಆದರೆ ಆಕೆ ಹೃದಯ ಸಂಬOಧಿ ಕಾಯಿಲೆಯಿಂದ ಬಳಲುತ್ತಿರುವ ಈ ವಿದ್ಯಾರ್ಥಿನಿ ಗಂಗಮ್ಮ ಜೀವದ ಪರೀಕ್ಷೆ ಜೊತೆಗೆ ಜೀವನ ಪರೀಕ್ಷೆ ಎದುರಿಸಿ ರಾಜ್ಯಮಟ್ಟದಲ್ಲಿ ಮಿಂಚಿದ್ದಾಳೆ.
ಗOಗಮ್ಮ ಹುಡೇದ ತಂದೆ ಬಸಪ್ಪ ಇಲೆಟ್ರಿಕಲ್ ಕೆಲಸ ಮಾಡುತ್ತಾರೆ. ತಾಯಿ ಗೀತಾ ಆಶಾ ಕಾರ್ಯಕರ್ತೆ. ಸಹೋದರ ನವೀನ ದ್ವಿತೀಯ ಪಿಯುಸಿ ಓದುತಿದ್ದಾನೆ. ಮುಚಖಂಡಿ ತಾಂಡಾದ ದುರ್ಗಾದೇವಿ ಪ್ರೌಢ ಶಾಲೆಯಲ್ಲಿ 8 ರಿಂದ 10 ತರಗತಿ ಓದಿದ್ದಾಳೆ.
ಗಂಗಮ್ಮ ಹುಟ್ಟಿನಿಂದ ಹೃದಯದಲ್ಲಿ ರಂದ್ರ ಕಾಣಿಸಿಕೊಂಡು ಸಮಸ್ಯೆ ಎದುರಿಸುತ್ತಿದ್ದಾಳೆ. ಆದರು ಸಹ ಓದಿನಲ್ಲಿ ಛಲ ಬಿಟ್ಟಿಲ್ಲ. ಚಿಕ್ಕವಳು ಇದ್ದಾಗಿನಿಂದ ಕಾಯಿಲೆ, ಬಡತನವಿದ್ದರು ಸಹ ಗುರಿ ಮುಟ್ಟುವ ತವಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಹೃದಯ ರೋಗದ ಚಿಕಿತ್ಸೆ ಕೊಡಿಸಲು ಪಾಲಕರು ಮಹಾನಗರಗಳಿಗೆ ಅಲೆದಿದ್ದಾರೆ.ಆದರೆ ಗಂಗಮ್ಮ ಗುಣಮುಖವಾಗುವುದು ಅಸಾಧ್ಯ ಹೇಳುತ್ತಿದ್ದಾರೆ. ವಿಶ್ರಾಂತಿ ಪಡೆಯುತ್ತಲೆ ಜೀವನ ಸಾಗಿಸಲು ಸಲಹೆ ನೀಡಿದ್ದಾರೆ. ಆದರು ಕೂಡಾ ವಿದ್ಯಾರ್ಥಿ
ಗಂಗಮ್ಮ ನಿತ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 4 ಗಂಟೆಗಳ ಕಾಲ ಓದುತ್ತಿದ್ದಳು. ಯಾವುದೇ ಟ್ಯೂಷನ್ ಇಲ್ಲದೇ ಕೇವಲ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವೇ ಆಕೆಗೆ ಆಧಾರವಾಗಿತ್ತು. ತೀವ್ರ ಅನಾರೋಗ್ಯವಿದ್ದರು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದಳು. ಪರೀಕ್ಷಾ ಕೇಂದ್ರಕ್ಕೆ ಓಡಾಡಿ ಆಯಾಸವಾಗಿದ್ದರಿಂದ ಸದ್ಯ ಮನೆಯಲ್ಲಿ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.