News Karnataka Kannada
Sunday, April 28 2024
ಬಾಗಲಕೋಟೆ

ಮಳೆ ತಗ್ಗಿದರೂ ಮುಗಿಯದ ಸಮಸ್ಯೆ

Rsz Img 20210807 Wa0093
Photo Credit :
ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ಘಟಪ್ರಭಾ, ಕೃಷ್ಣಾ ನದಿಗಳ ವಿರೂಟ ರೂಪ ಹಂತ ಹಂತವಾಗಿ ಕಡಿಮೆಯಾಗುತ್ತಿದ್ದು, ಆದರೇ ಪ್ರವಾಹ ಪ್ರದೇಶದಲ್ಲಿ ವ್ಯಾಪಾಕ ಪ್ರಮಾಣದಲ್ಲಿ ಗಲೀಜು, ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತುಕೊಂಡ ಪರಿಣಾಮ ಜನಜೀವನ ಸಹಜ ಸ್ಥಿತಿಗೆ ಮರಳು ಸಾಧ್ಯವಾಗುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರವ ಮೌನ ಆವರಿಸಿದೆ.
ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಹಾಗೂ ಬಾಗಲಕೋಟೆ, ಮುಧೋಳ ಭಾಗದಲ್ಲಿ ಘಟಪ್ರಭಾ ನದಿ ಪ್ರವಾಹ ತಗ್ಗಿದೆ. ಪ್ರವಾಹ ಭಯದಿಂದ ತತ್ತರಿಸಿರುವ ನಿರಾಶ್ರಿತರು ಇನ್ನು ಆಘಾತದಿಂದ ಹೊರ ಬಂದಿಲ್ಲ. ಅಕಾರಿಗಳು, ಜನಪ್ರತಿನಿಗಳು ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎನ್ನುವುದು ದುರಂತ ಸಂಗತಿ. ಹೀಗಾಗಿ ಪ್ರವಾಹದ ಹೊಡೆತಕ್ಕೆ ನುಲುಗಿರುವ ಸಂತ್ರಸ್ತರು ಇನ್ನು ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.ಸ್ಥಳಾಂತರಗೊಂಡಿರುವು 40 ಸಾವಿರಕ್ಕೂ ಹೆಚ್ಚು ನಿರಾಶ್ರಿತರಲ್ಲಿ ನೋವಿನ ಕಣ್ಣೀರ ಹರಿದು ಬರುತ್ತಿದೆ. ಜನರ ಕಷ್ಟ ಒಂದೆಡೆಯಾದರೆ, ಮೇವಿನ ಕೊರತೆಯಿಂದ ಜಾನುವಾರುಗಳ ಮೂಕವೇದನೆ ಮತ್ತಷ್ಟು ಕಂಗಡೆಸುವಂತೆ ಮಾಡಿದೆ. ನದಿ ಪಾತ್ರಗಳ ಗ್ರಾಮಗಳಲ್ಲಿ ಭಯ ಕಡಿಮೆಯಾಗುತ್ತಿಲ್ಲ.
 ಪ್ರವಾಹದಿಂದ  ಜಿಲ್ಲೆಯ ಹಲವೆಡೆ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ  ಮುಕ್ತವಾಗಿಲ್ಲ. ನೀರಿನ ರಭಸಕ್ಕೆ ಸೇತುವೆಗಳು ಭಾರಿ ಪ್ರಮಾಣದಲ್ಲಿ ಡ್ಯಾಮೇಜ್ ಆಗಿದ್ದು, ಸೇತುವೆಗಳ ಮೇಲೆ ಭಯದಿಂದ ಸಂಚರಿಸುವಂತಾಗಿದೆ. ಡಾಂಬರ್, ಸಿಸಿ ರಸ್ತೆಗಳು ಕಿತ್ತುಕೊಂಡು ಹೋಗಿದ್ದು, ಜಿಲ್ಲೆಯ ವಿವಿಧ  ಭಾಗದ ಜನರಿಗೆ ಸುಗಮ ಸಂಚಾರ ಇನ್ನು ಕಷ್ಟವಾಗುತ್ತಿದೆ. ಅನೇಕ ಗ್ರಾಮಗಳು ಸಂಪರ್ಕ ಇಂದಿಗೂ ಕಡಿತಗೊಂಡಿದೆ.ಪ್ರವಾಹದ ಹೊಡೆತಕ್ಕೆ ಸರ್ಕಾರಿ  ಆಸ್ತಿ-ಪಾಸ್ತಿಗಳು ಕೂಡಾ ನಷ್ಟವಾಗಿವೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು