ಬಾಗಲಕೋಟೆ: ಸಡಗರದಿಂದ ಆರಂಭಗೊ0ಡಿದ್ದ ಕೋಟೆ ನಗರಿಯ ಗಣೇಶ ಉತ್ಸವಕ್ಕೆ ಮಂಗಳವಾರ ಸಂಜೆ ಸಂಭ್ರಮದ ತೆರೆ ಬಿದ್ದಿದೆ .
ಕೋವಿಡ್ ಹಿನ್ನಲೆಯಲ್ಲಿ ಸಾಂಪ್ರದಾಯಕ ಆಚರಣೆಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈ ಬಾರಿ ಮನೆ ಹಾಗೂ ಸಾರ್ವಜನಿಕ ಉತ್ಸವ ಮಂಡಳಗಳು ಚಿಕ್ಕದಾಗಿರುವ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ಮೆರೆದಿದ್ದು ವಿಶೇಷವಾಗಿತ್ತು.
ಶುಕ್ರವಾರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಗಣೇಶ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 5 ದಿನಗಳ ಕಾಲ ಪ್ರತಿ ಮನೆ,ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಗಣೇಶ ಉತ್ಸವದ ಸಂಭ್ರಮ ಮನೆ ಮಾಡಿತ್ತು. ಪ್ರತಿನಿತ್ಯವು ಬೆಳಗ್ಗೆ, ಸಂಜೆ ಗಣೇಶನಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಿಸಲಾಗುತ್ತಿತ್ತು. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನಿಗೆ ಪೂಜೆ, ಗಣಹೋಮ ಜರುಗಿವು. ಕೋವಿಡ್ನಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ದೇಶನದಂತೆ ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಡಿಜೆ ಮ್ಯೂಜಿಕ್, ಧ್ವನಿ ವರ್ಧಕಗಳಿಗೆ ಸಂಪರ್ಣ ಬ್ರೇಕ್ ಬಿದ್ದಿತ್ತು. ಅಲ್ಲದೆ ಗಣೇಶ ಉತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ಚಿತ್ರಗೀತೆ, ನೃತ್ಯ, ರಂಗೋಲಿ, ಕಬ್ಬಡಿ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ನಾನಾ ಮನರಂಜನೆ ಕಾರ್ಯಕ್ರಮಗಳು ಇಲ್ಲದೆ ಪರಿಣಾಮ ಹಬ್ಬದ ಸಂತಸಕ್ಕೆ ಮೆರಗು ಇಲ್ಲದಂತಾಗಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಪರಸ್ಪರ ಅಂತರ್, ಸ್ಯಾನಿಕ ಟೈಜರ್ ಬಳಕೆಗೆ ಒತ್ತು ನೀಡಲಾಗಿತ್ತು. ಮಂಗಳವಾರ ಗಣೇಶ ಮೂರ್ತಿ ವಿಸರ್ಜನೆ ಮಾಡಬಾರದು ಎನ್ನುವ ಕಾರಣಕ್ಕೆ ಏಳಕ್ಕೆ ದಿನಕ್ಕೆ ಗುರುವಾರ ವಿಸರ್ಜನೆ ಕಾರ್ಯ ಮಾಡಲು ಕೆಲವು ಭಕ್ತರು ನಿರ್ಧರಿಸುತ್ತಿದ್ದಾರೆ. ಹಳೆ ನಗರ, ನವನಗರ, ವಿದ್ಯಾಗಿರಿ ಸೇರಿದಂತೆ 150 ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಲಾಗಿತ್ತು, ಗಣೇಶ ಮೂರ್ತಿಯ ಪೂಜಾ ವಿಧಿ ವಿಧಾನ, ಗಣೇಶ ಮೂರ್ತಿಯ ಅಲಂಕಾರಿಕ ವಸ್ತುಗಳು, ಆಭರಣಗಳು, ಪೂಜಾ ಸಾಮಗ್ರಿಗಳನ್ನು ಸವಾಲು ಮಾಡಲಾಯಿತು.
ಸಂಜೆ 6 ಗಂಟೆಯ ನಂತರ ಸರಳ ರೀತಿಯಲ್ಲಿ ಮೆರವಣಿಗೆ ಮೂಲಕ ವಿಸರ್ಜನೆ ಕಾರ್ಯ ಆರಂಭಗೊ0ಡಿತು. ಆದರೇ ಬಾನಂಗಳದಲ್ಲಿ ಬಾನು ಬಿರುಸುಗಳ ಚಿತ್ತಾರಗಳು, ಬಗೆ ಬಗೆಯಲ್ಲಿ ಮೂಡಿದ ಸಿಡಿಮದ್ದುಗಳ ಕಲರವ ಗಮನ ಸೆಳೆಯಿತು.ವಿಸರ್ಜನಾ ಮೆರವಣಿಗೆಯ ಮಾರ್ಗದುದ್ದಕ್ಕೂ `ಗಣಪತಿ ಬಪ್ಪ ಮೋರಯಾ… ಮಂಗಳ ಮೂರ್ತಿ ಮೋರಯಾ…’, `ಮೋರಯಾ, ಮೋರಯಾ… ಗಣಪತಿ ಬಪ್ಪ ಮೋರಯಾ…’, `ವಿಘ್ನೇಶ್ವರ ಮಹಾರಾಜಕೀ ಜೈ’ ಘೋಷಣೆಗಳು ಪ್ರತಿಧ್ವನಿಸಿದವು.
ಗಣೇಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.