ಬಾಗಲಕೋಟೆ: ಬಾದ್ರಪದ ಚೌತಿಯ ದಿನವಾದ ಶುಕ್ರವಾರ ವಿಘ್ನ ವಿನಾಶಕ, ವಕ್ರತುಂಡನ ಪ್ರತಿಷ್ಠಾನ ಕಾರ್ಯ ಕೋಟೆನಾಡಿನಲ್ಲಿ ಸಂಭ್ರಮದಿಂದ ಜರುಗಿತು. ಜಿಲ್ಲಾದ್ಯಂತ ಒಟ್ಟು 1200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಕೋವಿಡ್ ಭೀತಿ ಹಿನ್ನಲೆಯಲ್ಲಿ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿತ್ತು. ಸಾಂಪ್ರದಾಯಕ ಆಚರಣೆ ಮೂಲಕ ಬೆಳಗ್ಗೆಯಿಂದಲೇ ಸಂಭ್ರಮ ಸಡಗರದಿಂದ ಗಣೇಶ ಪ್ರತಿಷ್ಠಾಪನಾ ಕಾರ್ಯ ಆರಂಭವಾಯಿತು. ಮೊದಲು ಭಕ್ತರು ಮನೆ ಮನೆಗಳಲ್ಲಿ ಏಕದಂತನನ್ನು ಸ್ವಾಗತಿಸಿಕೊಂಡರು. ನಂತರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಜೈ ಗಣೇಶ, ಮಂಗಲ ಮೂರ್ತಿ ಮೊರೆಯಾ, ಗಣಪತಿ ಬಪ್ಪಾ ಮೊರೆಯಾ.. ಜೈ ಕಾರ ಹಾಕುತ್ತಾ, ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು.
ಬೆಳಗ್ಗೆ 11 ಗಂಟೆಯ ನಂತರ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಣೆ ಆರಂಭಗೊಂಡು ಮಧ್ಯಾನದ ವರೆಗೆ ಜರುಗಿತು. ದೊಡ್ಡ ಗಣೇಶ ಮೂರ್ತಿಗಳಿಗೆ ನಿಷೇಧಸಿದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕ ಅಡಿ ಗಣೇಶ ಮೂತರ್ಿಗಳಿಗೆ ಮಾತ್ರ ಪ್ರತಿಷ್ಠಾಪಣೆ ಮಾಡಲಾಯಿತು. ಡಿಜೆ, ಧ್ವನಿ ವರ್ಧಕಕ್ಕೆ ಅವಕಾಶ ಇಲ್ಲದ ಕಾರಣ ಭಕ್ತರು ಭಕ್ತಿ ಗೀತೆಗಳು ಹಾಡುತ್ತಾ ಟಂ.ಟಂ, ಕ್ರೂಸರ್, ಎತ್ತಿ ಬಂಡಿಗಳಲ್ಲಿ ಸರಳ, ಸಾಂಪ್ರದಾಯಕ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಮಂಡಳಿಗಳ ಸ್ವಯಂ ಸೇವಕರು ವಕ್ರತುಂಡನಿಗೆ ಜೈಕಾರ ಕೂಗಿದರು. ಸಾರ್ವಜನಿಕರ ಗಣೇಶ ಮೂರ್ತಿಗಳು ಮೆರವಣಿಗೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಮನೆಯಿಂದ ಆಚೆ ಬಂದು ಮೆರವಣಿಗೆ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿತು.
ಪೊಲೀಸ್ ಇಲಾಖೆ ನಿದರ್ಶನದಂತೆ ವೃತ್ತಗಳು, ಬೀದಿ, ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಸಾರ್ವಜನಿಕ ಮೂತರ್ಿ ಪ್ರತಿಷ್ಠಾಪನೆ ಮಾಡಲಿಲ್ಲ. ಬಯಲು ಪ್ರದೇಶ ಅಥವಾ ದೇವಸ್ಥಾನಗಳಲ್ಲಿ ಮಾತ್ರ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 4 ಅಡಿ, ಮನೆಗಳಲ್ಲಿ ಗರಿಷ್ಠ 2 ಅಡಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಅನ್ನ ಸಂತರ್ಪಣೆ, ಪ್ರಸಾದ ವಿತರಣೆಗೆ ಬ್ರೇಕ್ ಬಿದ್ದಿತ್ತು. ಇನ್ನು ಕೋವಿಡ್ ಭೀತಿ ಹಿನ್ನಲೆಯಲ್ಲಿ ಗಣೇಶ ಉತ್ಸವ ಮಂಡಳಿಗಳ ಕಾರ್ಯಕರ್ತರು ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯವಾಗಿ ಬಳಸಿದರು. ದೇವರ ದರ್ಶನಕ್ಕೆ ಪರಸ್ಪರ ಅಂತರ್ ಕಡ್ಡಾಯಗೊಳಿಸಲಾಗಿದೆ.