ಪಾವಗಡ: ಪ್ರಸಾದ ಸೇವಿಸಿ ಬಾಲಕನೊಬ್ಬ ಮೃತಪಟ್ಟು, 17 ಮಂದಿ ಅಸ್ವಸ್ಥರಾಗಿರುವ ಘಟನೆಯು ಪಾವಗಡ ತಾಲೂಕಿನ ನಿಡಗಲ್ ದುರ್ಗದ ವೀರಭದ್ರ ಸ್ವಾಮಿ ದೇಗುಲದಲ್ಲಿ ಬುಧವಾರ ನಡೆದಿದೆ.
ಮೃತ ಬಾಲಕನನ್ನು ಆಂಧ್ರದ ಮೋರಬಾಗಿಲು ಗ್ರಾಮದ ವೀರಭದ್ರ(12) ಎಂದು ಗುರುತಿಸಲಾಗಿದೆ. ಸೋಮವಾರ ನಿಡಗಲ್ ದುರ್ಗದ ವೀರಭದ್ರ ಸ್ವಾಮಿ ದೇಗುಲಕ್ಕೆ ಬಂದಿದ್ದ ಮೋರ ಬಾಗಿಲು ಮೂಲದ 18 ಮಂದಿ ತಂಡವು ಹರಿಸೇವೆ ಪ್ರಯುಕ್ತ ಅಡುಗೆ ತಯಾರಿಸಿ ಪ್ರಸಾದವಾಗಿ ಸೇವಿಸಿದ್ದರು.
ಸಂಜೆ ತಮ್ಮೂರಿಗೆ ಹಿಂತಿರುಗುವ ವೇಳೆ ಅಸ್ವಸ್ಥಗೊಂಡ ಇವರಲ್ಲಿ 9 ಮಂದಿಯನ್ನು ಶಿರಾ ಆಸ್ಪತ್ರೆಗೆ ಮತ್ತು 9 ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಡುಗೆಗೆ ಬಳಸಿರುವಂತಹ ನೀರಿನಿಂದಾಗಿ ಈ ಅವಘಡ ನಡೆದಿರಬಹುದು ಎಂದು ಶಂಕಿಸಲಾಗಿದೆ.