ಸಂಡೂರು: ನಾನು ಶ್ರೀರಾಮುಲುವಿಗೆ ಬೈದರೆ ಜಾತಿಯನ್ನು ಎತ್ತಿ ಕಟ್ಟಿ ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ. ಹಾಗೆಯೇ ನನಗೆ ಬೈದರೆ ಇಡೀ ಕುರುಬರಿಗೆ ಬೈದ ಹಾಗೇ ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗ ಸಂಡೂರಿಗೆ ಬಂದ ವೇಳೆ ಜಿ. ಜನಾರ್ದನ ರೆಡ್ಡಿ ಗುಂಪು ಗೂಂಡಾಗಳು ಕಳುಹಿಸಿದ್ದರು.
ಇದಕ್ಕೆ ಹೆದರಿ ನನ್ನ ಜತೆ ಅಧಿಕಾರಿಗಳು ಹಾಗೂ ಪೊಲೀಸರು ಬರಲು ಹಿಂದೇಟು ಹಾಕಿದ್ದರು ಎಂದು ಅಕ್ರೋಶವನ್ನು ವ್ಯಕ್ತಪಡಿಸಿದರು.