ಬೆಂಗಳೂರು: ನಿರ್ದೇಶಕನ್ನಿಲ್ಲದೆ ಕಲಾವಿದನಿಲ್ಲ. ನಿರ್ದೇಶಕರನ್ನು ಹೀಯಾಳಿಸುವ ಕೆಲಸವನ್ನು ಮಾಡಬಾರದಿತ್ತು ಎಂದು ನಟ ದರ್ಶನ್ ಪುಡಾಂಗ್ ಪದ ಬಳಕೆಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.
ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತುಂಬಾ ಬೇಜಾರಿಗಿದೆ. ದರ್ಶನ್ ನನ್ನ ಕುಟುಂಬದ ಸ್ನೇಹಿತ. ನಿರ್ದೇಶಕರಿಗೆ ಆ ರೀತಿ ಹೇಳಬಾರದಿತ್ತು. ಅದಕ್ಕಾಗಿ ನಾನು ಪತ್ರವೊಂದನಮ್ನು ಬರೆದು ನನ್ನ ಬೇಜಾರನ್ನು ವ್ಯಕ್ತಪಡಿಸಿದ್ದೇನೆ ಎಂದರು.
ನನಗೆ, ರಕ್ಷಿತಾಗೆ ದರ್ಶನ್ ಒಳ್ಳೆಯ ಸ್ನೇಹಿತ. ಅವರು ವೈಯ್ಯಕ್ತಿವಾಗಿ ಈ ರೀತಿ ಪದ ಬಳಕೆ ಮಾಡುವುದು ಎಷ್ಟು ಸರಿ. ಇದರಿಂದ ನನಗೆ ಬೇಜಾರಾಗಿದೆ. ನಮಗೂ ಸ್ವಾಭಿಮಾನ ಎಂಬುದು ಇದೆಯಲ್ಲ ಎಂದರು.