ಬೆಂಗಳೂರು: ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನನ್ನನ್ನು ಎಳೆದು ತಂದಿರುವುದು ತಪ್ಪು ಎಂದು ಪ್ರಕರಣದ ಆರೋಪಿ ಅರುಣ್ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಉಮಾಪತಿ ಈಗ ಸುಳ್ಳು ಹೇಳುತ್ತಿದ್ದಾರೆ. ನನ್ನ ಹಾಗೂ ಉಮಾಪತಿ ಮಧ್ಯೆ ಜನರಲ್ ಟಾಕ್ ಆಗಿರುವುದು ಸತ್ಯ. ನಾನು ಎರಡು ತಿಂಗಳ ಪರಿಚಯ ಅಂತ ಉಮಾಪತಿ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ದರ್ಶನ್ ಅಂತಹ ದೊಡ್ಡ ವ್ಯಕ್ತಿನ ಭೇಟಿಯಾಗಬೇಕಾದರೆ ಒಬ್ಬರ ಕೈ ಇರಲೇ ಬೇಕಲ್ವ. ಇನ್ನೆರಡು ದಿನ ಕಾಯಿರಿ. ಸತ್ಯಾಂಶ ಹೊರ ಬರುತ್ತೆ ಎಂದರು.
ಒಂದು ಹೆಣ್ಣನ್ನು ಈ ಪ್ರಕರಣಕ್ಕೆ ಉಪಯೋಗಿಸುವುದರ ಮೂಲಕ ಉಮಾಪತಿ ತಪ್ಪು ಮಾಡಿದ್ದಾರೆ. ನಮ್ಮ ಮನೆಯವರ ಸ್ಥಿತಿ ಬೀದಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾಗುವ ಮಟ್ಟಿಗೆ ಬಂದಿದ್ದೇವೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.