News Karnataka Kannada
Wednesday, May 08 2024
ಕರ್ನಾಟಕ

ಜಮೀನು ಮಂಜೂರಾತಿಗೆ ತಾಲೂಕು ಕಚೇರಿ ಮುಂದೆ 110 ಪ್ರಾಯದ ವಯೋವೃದ್ಧೆ ಅಳಲು

Photo Credit :

ಜಮೀನು ಮಂಜೂರಾತಿಗೆ ತಾಲೂಕು ಕಚೇರಿ ಮುಂದೆ 110 ಪ್ರಾಯದ ವಯೋವೃದ್ಧೆ ಅಳಲು

ಮೂಡಿಗೆರೆ: ತಾನು ಕಳೆದ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ 4 ಎಕರೆ ಕಾಫಿ ಹಾಗೂ ಅಡಿಕೆ ತೋಟದ ಜಮೀನನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡಲು ಸತಾಯಿಸಲಾಗುತ್ತಿದೆ ಎಂದು ಕೋಳೂರು ಗ್ರಾಮದ ಬಡವನದಿಣ್ಣೆಯ ನಿವಾಸಿ 110 ವರ್ಷ ಪ್ರಾಯದ ಸುಬ್ಬಮ್ಮ ಎಂಬ ಅಜ್ಜಿಯೊಬ್ಬರು ತಹಸೀಲ್ದಾರ್ ಕಚೇರಿ ಬಾಗಿಲಿನಲ್ಲಿ ಕುಳಿತು ಆರೋಪ ಮಾಡಿದ್ದಾರೆ.

ಕೋಳೂರು ಗ್ರಾಮದ ಸರ್ವೆ ನಂ.173ರಲ್ಲಿ ತಾನು 40 ವರ್ಷದಿಂದ ಕಾಫಿ, ಅಡಿಕೆ ಬೆಳೆದುಕೊಂಡಿದ್ದೇನೆ. 1989ರಲ್ಲಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದೆ. ಅರ್ಜಿ ಇದೂವರೆಗೂ ಇತ್ಯರ್ಥವಾಗಿಲ್ಲ. ಇತ್ತೀಚೆಗೆ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ವೇ ಕೂಡ ನಡೆದಿದೆ. ಆದರೆ ಮಂಜೂರಾತಿಗಾಗಿ ಕಾಯುತ್ತಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ. ಇಂದು ಫಾ.ನಂ 53 ಸಭೆ ಇದೆ. ಶಾಸಕರು ಬರುತ್ತಾರೆ ಎಂದು ವಿಷಯ ತಿಳಿಯಿತು. ಹಾಗಾಗಿ ತಾನು ಬಂದು ಶಾಸಕರಿಗಾಗಿ ಕಾಯುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.

ತನಗೆ 3 ಗಂಡು, 1 ಹೆಣ್ಣು ಮಕ್ಕಳಿದ್ದಾರೆ. ತನ್ನ ಗಂಡ ದಿವಂಗತ ಸುಬ್ಬೇಗೌಡರು ಮಾಡಿಟ್ಟಿದ್ದ ಜಮೀನನ್ನು ನನ್ನ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅವರೆಲ್ಲರೂ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ತಾನು ಮಗ ಲಕ್ಷ್ಮಣ್ ಗೌಡ ಎಂಬುವರೊಂದಿಗೆ ವಾಸವಿದ್ದೇನೆ. ಹಾಗಾಗಿ ನಾನು ನೆಟ್ಟು ಬೆಳೆಸಿದ ಕಾಫಿ, ಅಡಿಕೆ ಬೆಳೆಯಿರುವ 4 ಎಕರೆ ಜಮೀನಿನ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇನೆ. ಅದನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ಗೋಗರೆಯುತ್ತಿದ್ದದ್ದು ನೋಡಿ, ಅಲ್ಲಿದ್ದ ಸಾರ್ವಜನಿಕರು ಮರುಕಪಡುತ್ತಿದ್ದರು.

ನಂತರ ಸಂಜೆ 5.30ರ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಬಿ.ನಿಂಗಯ್ಯ ಒತ್ತುವರಿ ಅರ್ಜಿ ವಿಲೆ ಸಭೆಗೂ ಮುನ್ನ ಅಜ್ಜಿಯೊಂದಿಗೆ ಮಾತನಾಡಿ, ಆ ಜಮೀನನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಕೊಡುವುಗಾಗಿ ತಿಳಿಸಿ. ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಜ್ಜಿಯನ್ನು ಸಮಾಧಾನಪಡಿಸಿ ಕಳುಹಿಸಿದರು. ಚುನಾವಣೆ ಘೋಷಣೆಯಾಗುವ ಮುನ್ನವೇ ಅಜ್ಜಿಯ ಜಮೀನನ್ನು ಮಂಜೂರಾತಿ ಮಾಡಿಕೊಡುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
179

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು