ಕಾರವಾರ:ಕುಡಿತದ ಚಟಕ್ಕೆ ಅಪ್ಪ-ಮಗನ ನಡುವೆ ಜಗಳವಾಗಿ, ಜಗಳ ಅಪ್ಪನ ಕೊಲೆಯಲ್ಲಿ ಅಂತ್ಯವಾದ ಘಟನೆ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಪಂನ ಕಲವೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರಾಮಚಂದ್ರ ಗೌಡ(55)ಕೊಲೆಯಾದ ವ್ಯಕ್ತಿ. ಶ್ರೀಕಾತ ಗೌಡ(31) ಕೊಲೆಗೈದ ಆರೋಪಿ. ರಾತ್ರಿ ಕುಡಿದು ಮನೆಗೆ ಬಂದ ಮಗ ಗೇಟ್ ಹಾಕಿದ ವಿಷಯಕ್ಕೆ ಅಪ್ಪ-ಅಮ್ಮದ ಜೊತೆ ಜಗಳವಾಗಿದೆ. ಮತ್ತಿನಲ್ಲಿ ಆಕ್ರೋಶಗೊಂಡ ಮಗ ಅಲ್ಲೆ ಇದ್ದ ಕತ್ತಿಯಿಂದ ಹಲ್ಲೆ ಮಾಡಿ ಅಪ್ಪ ಕೊಲೆ ಮಾಡಿದ್ದಾನೆ. ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಕತ್ತಿಯಿಂದ ಹಲ್ಲೆ ಮಾಡಿ ಅಪ್ಪನ ಕೊಲೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.