News Karnataka Kannada
Sunday, April 28 2024
ಕರ್ನಾಟಕ

ಮಿರ್ಜಾ ಇಸ್ಮಾಯಿಲ್‌ ಮೊಮ್ಮಗಳ ಕೊಲೆ ಅಪರಾಧಿ ಶ್ರದ್ದಾನಂದನಿಂದ ರಾಷ್ಟ್ರಪತಿಗಳಿಗೆ ಕ್ಷಮೆ ಕೋರಿ ಪತ್ರ

Shraddhananda Khaleeli
Photo Credit :

ಬೆಂಗಳೂರು: ಬೆಂಗಳೂರಿನಲ್ಲಿ ರಲ್ಲಿ ನಡೆದಿದ್ದ ಮೈಸೂರಿನ ಮಾಜಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಮೊಮ್ಮಗಳು ಶಕೀರಾ ಖಲೀಲಿ ಕೊಲೆ ಪ್ರಕರಣದ ಮುಖ್ಯ ಅಪರಾಧಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ.
1991 ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣವು ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಅಪರಾಧಿ ಶ್ರದ್ಧಾನಂದ (83 ) ನ ಮೇಲಿದ್ದ ಆರೋಪ ಸಾಬೀತಾಗಿ ಬದುಕಿರುವವರೆಗೂ ಜೈಲಿನಲ್ಲಿರುವಂತೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಸನ್ನಡತೆ ಆಧಾರದಲ್ಲಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲಿರುವ ಅಪರಾಧಿ, ಬೆಂಗಳೂರಿನ ರಿಚ್ಮಂಡ್ ರಸ್ತೆಯ 600 ಕೋಟಿ ರೂಪಾಯಿ ಆಸ್ತಿಗಾಗಿ ಕಣ್ಣಿಟ್ಟು, ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿದ್ದನು. ಅಪರಾಧಿ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದಾನೆ.
ಆರೋಪಿ ಶ್ರದ್ದಾನಂದ ಮೃತ ಶಕೀರಾ ಖಲೀಲಿ ಯನ್ನು ವಿವಾಹವಾಗಿದ್ದನು. ಶಕೀರಾ ಮೊದಲೇ ಬೇರೆ ಮದುವೆ ಆಗಿದ್ದು ಗಂಡನಿಗೆ ವಿಚ್ಚೇದನ ನೀಡಿ ಆತನನ್ನು ವಿವಾಹ ಆಗಿದ್ದಳು. 1991 ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಶಕೀರಾ, 1994 ರಲ್ಲಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಈಕೆಗೆ ಟೀ ಯೊಳಗೆ ನಿದ್ರೆ ಮಾತ್ರೆ ನೀಡಿ   ಶ್ರದಾನಂದ ಕೊಲೆ ಮಾಡಿದ್ದ .ಅಲ್ಲದೆ ಜೀವಂತ ಇರುವಾಗಲೇ ಹೂತು ಹಾಕಿದ್ದ .
ಪತ್ನಿಯನ್ನು ಹತ್ಯೆಗೈದ ಅಪರಾಧಿ ಪತಿ ಮನೆಯ ಗೋಡೆ ಹಿಂಭಾಗವೇ ಹೂತಿಟ್ಟಿದ್ದ, ನಂತರ ಪ್ರಕರಣ ಬೆಳಕಿಗೆ ಬಂದು ಆತನ ಬಂಧನವಾಯಿತು. 2000 ಇಸವಿಯಲ್ಲಿ ಕೋರ್ಟ್ ಈ ಬಗ್ಗೆ ಸೂಕ್ಷ್ಮವಾಗಿ ವಿಚಾರಣೆ ನಡೆಸಿತು. 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಶ್ರದ್ಧಾನಂದ, ಬಳಿಕ ಬೆಂಗಳೂರಿನ ಪರಪ್ಪನ ಅಗ್ರಗಾರ ಜೈಲಿನಲ್ಲಿದ್ದನು. 2011 ರಲ್ಲಿ ಆತನ ಮನವಿ ಮೇರೆಗೆ ಮಧ್ಯಪ್ರದೇಶದ ಜೈಲಿಗೆ ಆತನನ್ನು ಸ್ಥಳಾಂತರ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು