ಮಂಗಳೂರು: ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ವತಿಯಿಂದ ಒಂದು ದಿನದ “ಪ್ರಿಪೇರ್ ಕ್ಯಾಪ್ಟ್ನರ್ ಅಂಡ್ ಫಿಕ್ಸಿಟ್ ” ಈ ವಿಷಯದ ಬಗ್ಗೆ ಒಂದು ದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ಅಕ್ಟೋಬರ್26 ರಂದು ಸಾಯಂಕಾಲ ನಡೆಸಲಾಯಿತು. ಇದನ್ನು ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ ಡಾ . ಜಿತೇಶ್ ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಡಾ. ಸನತ್ ಶೆಟ್ಟಿ, ಪ್ರೊಫೆಸರ್ ಯೆನೆಪೋಯ ಯೂನಿವರ್ಸಿಟಿ , ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಂತ ವೈದ್ಯಕೀಯ ದಲ್ಲಿ ಕೃತಕ ಹಲ್ಲಿನ ಅಳವಡಿಕೆ ಇದರ ಬಗ್ಗೆ ಮಾಹಿತಿ ಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಡಾ. ಭರತ್ ಪ್ರಭು ಹಾಗು ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ಹಾಗು ಐ ಡಿ ಏ ಯ ಡಾ. ನಂದಿತಾ ಶೆನೊಯ್ ರವರು ಉಪಸ್ಥಿತರಿದ್ದರು. ಡಾ. ಮಲ್ಲಿಕಾ ಶೆಟ್ಟಿ ರವರು ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತ ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ಒಂದು ದಿನ ದ ದಂತವೈದ್ಯಕೀಯ ಕಾರ್ಯಾಗಾರ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.