ಉಡುಪಿ : ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಬ್ರಹ್ಮಾವರದ ಅಪಾರ್ಟ್ ಮೆಂಟ್ ನಲ್ಲಿ ಕೊಲೆಯಾಗಿದ್ದ ಗೃಹಿಣಿ ವಿಶಾಲ ಗಾಣಿಗ ಹಂತಕರ ಹೆಡೆಮುರಿ ಕಟ್ಟುವಲ್ಲಿ ಉಡುಪಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅಮಾಯಕನಂತೆ ನಟಿಸುತಿದ್ದ ಪತಿಯೇ ಸುಪಾರಿ ನೀಡಿ ಬಾಡಿಗೆ ಹಂತಕರಿಂದ ಕೊಲೆ ಮಾಡಿಸಿರುವುದು ಸಾಬೀತಾಗಿದ್ದು ಆರೋಪಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿದ್ದಾರೆ.
ಇದೀಗ ಪೊಲೀಸ್ ಬಂಧನದಲ್ಲಿದ್ದ ರಾಮಕೃಷ್ಣನನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರಿಂದ ಆರೋಪಿ ರಾಮಕೃಷ್ಣನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೊಲ್ಲಿ ರಾಷ್ಟ್ರದಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದ ಆರೋಪಿ ರಾಮಕೃಷ್ಣ ಉಡುಪಿ ಜಿಲ್ಲೆಯ ಕೆಲವೆಡೆ ಆಸ್ತಿ ಮಾಡಿದ್ದ. ಇದನ್ನು ನೋಡಿಕೊಳ್ಳಲು ಪತ್ನಿ ವಿಶಾಲ ಗಾಣಿಗರನ್ನು ಕಳಿಸುತಿದ್ದ. ರಾಮಕೃಷ್ಣನ ಆಕ್ರಮ ಸಂಬಂಧ, ಆಸ್ತಿ ವ್ಯವಹಾರವೇ ವಿಶಾಲ ಕೊಲೆಗೆ ಕಾರಣವಾಯಿತಾ? ಎಂಬ ಬಗ್ಗೆ ತನಿಖೆ ಸಾಗಿದೆ. ಸಂಶಯದ ಹಿನ್ನೆಲೆಯಲ್ಲಿ ಪತಿಯನ್ನು ಕೆಲ ದಿನಗಳ ಹಿಂದೆಯೇ ವಶಕ್ಕೆ ಪಡೆದಿರುವ ಪೊಲೀಸರು, ನಿನ್ನೆ ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಕೊಲೆಗೆ ಸುಪಾರಿ ಪಡೆದ ಆರೋಪಿಗಳಲ್ಲಿ ಓರ್ವನನ್ನು ಪೊಲೀಸ್ ತಂಡ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು ಉಡುಪಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದು ಇನ್ನೋರ್ವ ಹಂತಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ. ಹಾಡಹಗಲೇ ನಡೆದಿದ್ದ ಈ ಕೊಲೆಯು ತಲ್ಲಣ ಸೃಷ್ಟಿಸಿದ್ದು ಇದನ್ನು ಬೇಧೀಸಲು ಪೋಲೀಸರು ನಾಲ್ಕು ತಂಡಗಳನ್ನು ರಚಿಸಿದ್ದರು.
ಬ್ರಹ್ಮಾವರದಲ್ಲಿ ಸುಪಾರಿ ನೀಡಿ ಪತ್ನಿ ಕೊಲೆ ; ಪತಿ , ಮತ್ತೊಬ್ಬ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.