ಕಾರವಾರ: ತನ್ನ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ಕಾರವಾರ ತಾಲೂಕಿನ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿಂದು ಪ್ರಕರಣ ದಾಖಲಾಗಿದೆ.
ಕಾರವಾರದ ಹಳಗಾದ ಅನುಜ್ ನಾಯ್ಕ ನಾಪತ್ತೆಯಾದ ಯುವಕ. ಈತ ಕಳೆದ ಎರಡು ದಿನಗಳ ಹಿಂದೆ ಐವರು ಸ್ನೇಹಿತರೊಂದಿಗೆ ಕಾಳಿ ನದಿಯ ಹಿನ್ನಿರಿನ ಪ್ರದೇಶಕ್ಕೆ ತೆರಳಿದ್ದ.
ರಾತ್ರಿ ಅಲ್ಲೇ ಮಲಗಿದ್ದು ಬೆಳಗ್ಗೆ ಬಟ್ಟೆ ಮಾತ್ರ ಸ್ಥಳದಲ್ಲಿದ್ದು ಅನುಜ್ ನಾಯ್ಕ ಮಾತ್ರ ಪತ್ತೆಯಾಗಿಲ್ಲ. ಯುವಕನ ನಾಪತ್ತೆ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ನಾಲ್ವರ ವಿಚಾರಣೆ ನಡೆಸಿದ್ದು ಯವಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಉತ್ತರ ಕನ್ನಡ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.