News Karnataka Kannada
Sunday, May 12 2024
ಕರ್ನಾಟಕ

ಯುವಜನರಲ್ಲಿನ ನಿರಾಸಕ್ತಿ ಕೂಡ ಕೃಷಿಯ ಹಿನ್ನಡೆಗೆ ಕಾರಣ: ಕೇರಳ ರಾಜ್ಯಪಾಲರು

Photo Credit :

ಯುವಜನರಲ್ಲಿನ ನಿರಾಸಕ್ತಿ ಕೂಡ ಕೃಷಿಯ ಹಿನ್ನಡೆಗೆ ಕಾರಣ: ಕೇರಳ ರಾಜ್ಯಪಾಲರು

ಕಾಸರಗೋಡು: ಯುವಜನರಲ್ಲಿನ ನಿರಾಶಕ್ತಿ, ಕಾರ್ಮಿಕರ ಕೊರತೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಕೃಷಿಯಲ್ಲಿ ಹಿನ್ನಡೆಗೆ ಕಾರಣ ಎಂದು ಕೇರಳ ರಾಜ್ಯಪಾಲ ಟಿ. ಸದಾಶಿವಂ ಅಭಿಪ್ರಾಯಪಟ್ಟರು.

ಅವರು ಶನಿವಾರ ಕಾಸರಗೋಡು ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್ ಐ)ನಲ್ಲಿ ಉದ್ದಿಮೆದಾರರ ಸಂಗಮ ಮತ್ತು ಕೃಷಿ ಉಪಕರಣ ಪ್ರದರ್ಶನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕೇರಳದಲ್ಲಿ ಕೃಷಿಯು ಕುಂಠಿತವಾಗುತ್ತಿದೆ. ಒಂದೆಡೆ ಕಾರ್ಮಿಕರ ಕೊರತೆ, ಜೊತೆಗೆ ಕೃಷಿಗೆ ಬಳಸುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಮೊದಲಾದ ಕಾರಣಗಳಿಂದ ಕೃಷಿಯಿಂದ ಹಿಂದೆ ಸರಿಯುವಂತಾಗಿದೆ ಎಂದರು.

ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರವು ಕೃಷಿ ಸಂಶೋಧಕರಿಗೆ ಹಾಗೂ ಸ್ವಾವಲಂಬಿದಾರರಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು, ಸಿಪಿಸಿಆರ್ ಐ ನಿರ್ದೇಶಕ ಡಾ. ಪಿ. ಚೌಡಪ್ಪ, ಡಾ. ರಾಜು ನಾರಾಯಣ ಸ್ವಾಮಿ, ಡಾ. ಕೆ. ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು