News Karnataka Kannada
Sunday, May 12 2024
ಕರ್ನಾಟಕ

ಕೊಡಗಿನಲ್ಲಿ ಮಕ್ಕಳಿಗೆ ದೊರೆಯದ ಪಠ್ಯಪುಸ್ತಕ!

Photo Credit :

ಕೊಡಗಿನಲ್ಲಿ ಮಕ್ಕಳಿಗೆ ದೊರೆಯದ ಪಠ್ಯಪುಸ್ತಕ!

ಮಡಿಕೇರಿ: ಶಾಲೆ ಆರಂಭವಾಗಿ ತಿಂಗಳೇ ಕಳೆದರೂ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆಯಾಗದಿರುವುದರಿಂದ ಪರದಾಡುವಂತಾಗಿದೆ. ಇಷ್ಟರಲ್ಲೇ ಪಾಠಪ್ರವಚನಗಳು ಆರಂಭವಾಗಿವೆ. ಆದರೆ ಕೊಡಗಿನ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆಯಾಗಿಲ್ಲ.

ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಇನ್ನೂ ಕೂಡ ಬಂದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಶಾಲೆಗಳ ಶಾಲಾ ಶಿಕ್ಷಕರೇ ಆಗಮಿಸಿ ಜಿಲ್ಲಾ ಕೇಂದ್ರದಿಂದ ಪಠ್ಯಪುಸ್ತಕವನ್ನು ತಮ್ಮ ಶಾಲೆಗಳಿಗೆ ಕೊಂಡೊಯ್ಯಬೇಕಿದೆ. ಆಗಾಗ್ಗೆ ಬರುತ್ತಿದ್ದರೂ ಎಲ್ಲ ವಿಷಯಗಳ ಪುಸ್ತಕಗಳು ದೊರೆಯದೆ ಹಿಂತಿರುಗುವಂತಾಗಿದೆ.

ಶಾಲೆ ಪ್ರಾರಂಭವಾದಲ್ಲಿಂದ ಇದುವರೆಗೆ ಪಠ್ಯಪುಸ್ತಕ ವಿತರಣೆಯಾಗದೆ ಪ್ರತೀ ಶಾಲೆಯಿಂದ ಒಂದೆರಡು ಶಿಕ್ಷಕರು ತಮ್ಮ ಪಾಠ ಪ್ರವಚಗಳನ್ನು ಬಿಟ್ಟು ಎರಡು ಮೂರು ಬಾರಿ ಇಲಾಖೆಯ ಪುಸ್ತಕ ವಿತರಣಾ ಕೇಂದ್ರಕ್ಕೆ ಅಲೆದು ಪುಸ್ತಕಕ್ಕೆ ಕಾದು ಕುಳಿತು ಹಿಂತಿರುಗುತ್ತಿದ್ದು, ಜೊತೆಗೆ ಅದರ ಖರ್ಚನ್ನು ಅವರೇ ಭರಿಸಬೇಕಿದೆ ಎಂಬುದು ಶಿಕ್ಷಕರ ಅಳಲಾಗಿದೆ.

ಈಗಾಗಲೇ ಒಂದೆರಡು ಅಧ್ಯಾಯಗಳು ಮುಗಿಯಬೇಕಿತ್ತು. ಆದರೆ ಪುಸ್ತಕವೇ ಸಿಗದ ಕಾರಣ ಪಾಠ ಮಾಡುತ್ತಿದ್ದರೂ ಮಕ್ಕಳಿಗೆ ಕಲಿಯಲು ತೊಂದರೆಯಾಗುತ್ತಿದೆ. ಪ್ರೌಢಶಾಲೆಗಳ ಎಂಟನೇ ತರಗತಿಯ ಗಣಿತ, ಒಂಭತ್ತನೇ ತರಗತಿಯ ಗಣಿತ ಭಾಗ2, ಸಮಾಜ ಭಾಗ2, ದೈಹಿಕ ಶಿಕ್ಷಣ ಹಾಗೂ ಹತ್ತನೇ ತರಗತಿಯ ಗಣಿತ ಭಾಗ2 ಪುಸ್ತಕಗಳು ಇನ್ನು ವಿತರಣೆಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.

ಗ್ರಾಮೀಣ ಪ್ರದೇಶಗಳಿಂದ ಪುಸ್ತಕ ಪಡೆದುಕೊಳ್ಳಲು ಶಿಕ್ಷಕರು ಬರುವುದರಿಂದ ಮಕ್ಕಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಮಕ್ಕಳಿಗೆ ಅಗತ್ಯ ಪಠ್ಯಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು