ಚೆಟ್ಟಳ್ಳಿ: ಚಿಕ್ಕಮಂಗಳೂರಿನಲ್ಲಿ ನಡೆದ ಕಾಫಿಡೇ ಇಂಡಿಯನ್ ರ್ಯಾಲಿ-2017ರಲ್ಲಿ ಕೊಡಗಿನ ಕೊಂಗಂಡ ಗಗನ್ ಕುರುಂಬಯ್ಯ ಹಾಗೂ ಕೇಟೋಳಿರ ಅಮ್ರತ್ತಿಮಯ್ಯ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನವಂಬರ್ 24ರಿಂದ 26ರವರೆಗೆ ಚಿಕ್ಕಮಂಗಳೂರಿನಲ್ಲಿ ನಡೆದ ಜಿಪ್ಸಿ ಕ್ಲಾಸ್ ರ್ಯಾಲಿಯಲ್ಲಿ ಡ್ರೈವರ್ ಆಗಿ ಅಮ್ಮತಿಯ ಕೊಂಗಂಡ ಗಗನ್ ಕುರುಂಬಯ್ಯ ಹಾಗೂ ನಾವಿಗೇಟರ್ ಮಕಪಾಡಿಯ ಕೇಟೋಳಿರ ಅಮ್ರತ್ತಿಮ್ಮಯ್ಯ ಉತ್ತಮ ಪ್ರದರ್ಶನ ನೀಡಿ ಮೊದಲ ಬಹುಮಾನವನ್ನು ಪಡೆದರು. ಸೋಮವಾರ ಪೇಟೆಯ ಸಚಿನ್ ಮೂರ್ತಿ(ಡ್ರೈವರ್) ಎರಡನೇ ಬಹುಮಾನ ಪಡೆದಿದ್ದಾರೆ. ಮೂವರು ಮೊದಲ ಬಾರಿಗೆ ರ್ಯಾಲಿ ಪ್ರತಿನಿಧಿಸಿದರೂ ಕೊಂಗಡ ಗಗನ್ ಕುರುಂಬಯ್ಯ ಕಳೆದ ನಾಲ್ಕು ವರ್ಷಗಳಿಂದ ನ್ಯಾವಿಗೇಟರಾಗಿ ಹಲವು ರ್ಯಾಲಿಯಲ್ಲಿ ಬಾಗವಹಿಸಿದ್ದಾರೆ.