News Karnataka Kannada
Monday, May 20 2024
ಕರ್ನಾಟಕ

ಯಥಾ ಸ್ಥಿತಿಗೆ ಮರಳಿದ ಕಪಿಲೆ, ಸಂಚಾರ ಸುಗಮ

Photo Credit :

ಯಥಾ ಸ್ಥಿತಿಗೆ ಮರಳಿದ ಕಪಿಲೆ, ಸಂಚಾರ ಸುಗಮ

ಮೈಸೂರು: ಕಪಿಲ ನದಿಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದರಿಂದ ಸದ್ಯ ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿದೆ.

ಪ್ರವಾಹದಿಂದಾಗಿ ಕಳೆದ ನಾಲ್ಕು ದಿನಗಳಿಂದ ಮೈಸೂರು-ನಂಜನಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಜನ ಪರದಾಡುವಂತಾಗಿತ್ತಲ್ಲದೆ, ಜನ ನಂಜನಗೂಡಿನಿಂದ ಮೈಸೂರಿಗೆ ತೆರಳಬೇಕಾಗಿದರೆ ಹಜ್ಜಿಗೆ ಬಸವನಪುರ, ಕೆಂಪೀಸಿದ್ದನಹುಂಡಿ, ಇಮ್ಮಾವು, ಅಡಕನಹಳ್ಳಿ ಹುಂಡಿ ಮಾರ್ಗವಾಗಿ ತೆರಳಿ ಕಡಕೊಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವಂತಾಗಿತ್ತು. ಮತ್ತೆ ಕಡಕೊಳದಿಂದ ನಂಜನಗೂಡಿಗೆ ಬರಬೇಕಾದರೆ ಅದೇ ಮಾರ್ಗವಾಗಿ ಬರಬೇಕಾಗಿತ್ತು, ಈ ನಡುವೆ ರಸ್ತೆ ತುಂಬಾ ಕಿರಿದಾಗಿದ್ದರಿಂದ ತೊಂದರೆಯಾಗಿತ್ತು.

ಇದೀಗ ಕೇರಳದಿಂದ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ನೀರು ಕಡಿಮೆಯಾಗಿದ್ದರಿಂದ ಜನ ನೆಮ್ಮದಿ ಪಡುವಂತಾಗಿದೆ.

ಮಲ್ಲನಮೂಲೆ ಮಠದಿಂದ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದವರೆಗೆ ರಸ್ತೆಯನ್ನು 3 ರಿಂದ 5 ಅಡಿಯವರೆಗೆ ಎತ್ತರ ಮಾಡಿದರೆ ಕಪಿಲೆಯ ಯಾವುದೇ ಪ್ರವಾಹ ಬಂದರೂ ರಸ್ತೆಯ ಸಂಚಾರಕ್ಕೆ ಅಡಚಣೆಯಾಗದೆ ಸಾರ್ವಜನಿಕರು ಯಾವುದೇ ತೊಂದರೆ ಅನುಭವಿಸದೇ ಅವರ ಕೆಲಸಕ್ಕೆ ಸುಗಮವಾಗಿ ತೆರಳ ಬಹುದಾಗಿದೆ. ಆದ್ದರಿಂದ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಗೂ ಜನಪ್ರತಿನಿಧಿಗಳು ಈ ರಸ್ತೆಯ ಎತ್ತರಗೊಳಿಸಲು ಗಮನ ಹರಿಸಿ ಪ್ರವಾಹ ಬಂದಾಗ ಯಾವುದೇ ಅಡಚಣೆಯಿಲ್ಲದೇ ಪ್ರಯಾಣೀಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು