News Karnataka Kannada
Monday, May 20 2024
ಯುಎಇ

ದುಬೈ: ನ. 20 “ದುಬೈ ಗಡಿನಾಡ ಉತ್ಸವ ೨೦೨೨” ಕಾರ್ಯಕ್ರಮ

Photo Credit : News Kannada

ದುಬೈ: ಬಹುಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡಿನ ಸಂಪತ್ಭರಿತವಾದ ಜಾನಪದ ಸಾಹಿತ್ಯದ, ಕಲೆಗಳ ಕಂಪು – ಸೊಂಪು, ಸಿರಿ ಸೊಬಗನ್ನು ಕಾಪಾಡುತ್ತಾ, ಮರೆಯಾಗುತ್ತಿರುವ ಜಾನಪದ ಕಲೆ, ಸಂಸ್ಕೃತಿಯನ್ನು, ಕನ್ನಡ ಭಾಷೆಯನ್ನು ಉಳಿಸಲು ಅಂತೆಯೇ ಬಹು ಭಾಷೆಗಳ ಸಂಗಮ ನೆಲದಲ್ಲಿ ವೈವಿಧ್ಯ ಸಂಸ್ಕೃತಿಯ ಸಂವರ್ಧನೆಯ ಉದ್ದೇಶದೊಂದಿಗೆ ನಾಡಿನ ನಾಡಿಮಿಡಿತವಾಗಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಆಕಾಡೆಮಿ ಕಾಸರಗೋಡು ಈಗಾಗಲೇ ಗಡಿಯ, ರಾಜ್ಯದ, ದೇಶದ ಎಲ್ಲೆಯನ್ನು ಮೀರಿ ಕೊಲ್ಲಿ ರಾಷ್ಟ್ರವಾದ ಯು.ಎ.ಇ ಯಲ್ಲಿ ಘಟಕ ಸ್ಥಾಪಿಸಿದೆ.

ಯು.ಎ.ಇ ಯಲ್ಲಿ ನೆಲೆಸಿರುವ ಕಾಸರಗೋಡಿನ ಕನ್ನಡ ಭಾಷಿಕರನ್ನು ಒಟ್ಟು ಸೇರಿಸಿ ಅವರ ಸಾಂಸ್ಕೃತಿಕ – ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಬೈಯಲ್ಲಿ ನ. ೨೦ ಭಾನುವಾರದಂದು ದುಬೈ ಆಲ್ ಸಫಾ “ಜಗದ್ಗುರು ಸುತ್ತೂರು ಸಂಸ್ಥಾನ” (ಜೆ.ಎಸ್.ಎಸ್) ಶಾಲಾ ಸಭಾಭವನದಲ್ಲಿ, “ದುಬೈ ಗಡಿನಾಡ ಉತ್ಸವ ೨೦೨೨” ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಯು.ಎ.ಇ ಘಟಕಕ್ಕೆ ಚಾಲನೆ ನೀಡಲಾಗುವುದು.

ಸಂಜೆ 4 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ  ಉದ್ಘಾಟನ ಕಾರ್ಯಕ್ರಮದಲ್ಲಿ ಗಡಿನಾಡ ಉತ್ಸವ ಸಮಿತಿ ಗೌರವಾಧ್ಯಕ್ಷರು ಅಮರದೀಪ ಕಲ್ಲೂರಾಯ, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ ಅಬುದಾಬಿ, ಜಿಎಸ್ಎಸ್ ಅಕಾಡೆಮಿ ಯುಎಇ ಯ ಪ್ರಧಾನ ಕಾರ್ಯದರ್ಶಿ ಮುನೀರ್ ಕುಬನೂರು, ಜಿಎಸ್ಎಸ್ ಅಕಾಡೆಮಿ ಯುಎಇ ಯ ಖಜಾಂಚಿ ಅನೀಶ್ ಶೆಟ್ಟಿ ಮಡಂದೂರು ಭಾಗವಹಿಸಲಿದ್ದಾರೆ.

ಸಂಜೆ ಏಳು ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಶಾಸಕಾಂಗ ಪರಿಷತ್ತಿನ ಮುಖ್ಯಸ್ಥ ರಗುನಾಥ ರಾವ್ ಮಲ್ಕಪುರೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಕರ್ನಾಟಕ ಬೋರ್ಡರ್ ಪ್ರವೇಶಾಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಅಧ್ಯಕ್ಷ ಡಾ.ಡಿ ಸೋಮಶೇಖರ್ ಐಎಸ್ ಇತಿಹಾಸ ಅಕೆಡಮಿಯ ಉದ್ಘಾಟನೆಯನ್ನು ವಿರೋಧ ಪಕ್ಷದ ಮುಖ್ಯ ಸಚೇತಕ ಕರ್ನಾಟಕ ವಿಧಾನ ಪರಿಷತ್ ಪ್ರಕಾಶ್ ಕೆ ರಾಥೋಡ್ ನೆರೆವೇರಿಸಲಿದ್ದಾರೆ. ಗಡಿನಾಡ ರತ್ನ ಪ್ರಶಸ್ತಿ ಪ್ರಧಾನ ಕೇರಳ ಸರ್ಕಾರದ ಎಮ್‌ಎಲ್‌ಎ ಎಕೆಎಮ್ ಅಶ್ರಫ್ ಮಾಡಲಿದ್ದಾರೆ. ಅತಿಥಿಗಳಾಗಿ ಫೌಡೇಶನ್ ಫಾರ್ ಕ್ವಾಲಿಟಿ ಇಂಡಿಯಾದ ಅಧ್ಯಕ್ಷ ವೆಂಕಟೇಶ್ ಥುಪ್ಪಿಲ್, ಕೇರಳ ವಿಧಾನ ಸಭೆಯ ಸದಸ್ಯ ಸಿಎಚ್ ಕುನ್ಹಂಬು, ಯುಎಇಯ ಮಾಜಿ ಪರಿಸರ ಮತ್ತು ಜಲ ಸಚಿವ ಡಾ. ಮೊಹಮ್ಮದ್ ಸೈಯದ್ ಅಲ್ ಕಿಂಡಿ, ದುಬೈನ ಥೆಕ್ರಾ ಫರಾಜ್ ತಾಜ್, ಪ್ರೈಮ್ ಹೆಲ್ತ್ ಕೇರ್ ದುಬೈ ಎಮ್‌ಡಿ ಜಮೀಲ್ ಅಹಮ್ಮದ್, ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಭಾಗವಹಿಸಲಿದ್ದಾರೆ.ಗಡಿನಾಡ ಉತ್ಸವ ಸಮಿತಿ ಸಂಯೋಜಕ ಸದಂದಾಸ್ ಶಿರೂರು ಅತಿಥಿಗಳನ್ನು ಪರಿಚಯಿಸಲಿದ್ದಾರೆ. ಗಡಿನಾಡಿ ಉತ್ಸವ ಸಮಿತಿ ಅಧ್ಯಕ್ಷ ವಕೀಲ ಇಬ್ರಾಹಿಂ ಕಲೀಲ್ ಅರೆಮಲೆ ಸ್ವಾಗತಿಸಲಿದ್ದಾರೆ.

ಕೇರಳ ಸ್ಟೇಟ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ನಿರ್ದೇಶಕರಾದ ಅಬ್ದುಲ್ ರಝಾಕ್ ಚಿಪ್ಪರ್, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಸುಂದರ್ ರಾಜ್ ಬೇಕಲ್, ಕೆಎಂಸಿಸಿ ಯು ಎ ಇ ಯ ಕೋಶಾಧಿಕಾರಿಗಳಾದ ನಿಝರ್ ತಾಲಂಗಾರ, ಕೇರಳದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಪ್ರಭಾಕರ ಕಲ್ಲುರಾಯ ಬಾನಾದಗದ್ದೆ, ಕನ್ನಡ ಭವನ ಕಾಸರಗೋಡಿನ ಕೋಶಾಧಿಕಾರಿ ಸಂಧ್ಯಾ ರಾಣಿ ಟೀಚರ್, ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಾಸರಗೋಡು ಇದರ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿವರು.

ಗೌರವಾರ್ಪಣೆ:

ತುಳು ಅಧ್ಯಾಯನ ಪೀಠ ಮಂಗಳೂರು ವಿಶ್ವವಿದ್ಯಾಲಯ ಸದಸ್ಯ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನೇಗಾರ್ ಮೀರಾನ್ ಸಾಹೇಬ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಕ್ವಾಡಿ ಪ್ರವೀಣ್ ಶೆಟ್ಟಿ, ಉದ್ಯಮಿ ಸಲಾಂ ಅಟ್ಟೆಗೋಳಿ, ಅಂತರರಾಷ್ಟ್ರೀಯ ವಾಸ್ತು ತಜ್ಞ ಅಶೋಕ್ ಪುರೋಹಿತ್, ಉದ್ಯಮಿ ಸಿದ್ದೀಕ್ ಅರೂಸ್ ಅಜ್ಮಾನ್, ಓಸಿಯನ್ ಲೈನ್ ಗ್ರೂಪ್ ಆಫ್ ಕಂಪನೀಸ್ ಎಂ.ಡಿ ಅಬ್ದುಲ್ ರಶೀದ್ ಕೆ.ಎಚ್. ಉದ್ಯಮಿ ಅಬ್ದುಲ್ ಸಲಾಂ ಚೆವರ್ ಇವರಿಗೆ ಈ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನಡೆಯಲಿದೆ.

 ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತರು: 

ಕರ್ನಾಟಕ ಸರ್ಕಾರದ ಮಾಜಿ ಸಚಿವ ಜೆ.ಕೃಷ್ಣ ಪಾಲೆಮರ್, ಆಕ್ಮೆ ಗ್ರೂಪ್ ದುಬೈ ಯುಎಇ ಅಧ್ಯಕ್ಷ ಹರೀಶ್ ಶೇರಿಗಾರ್ ಮತ್ತು ಜಾಯೆದ್ ಫೌಂಡೇಶನ್ ಅಬುದಾಬಿ ಯುಎಇ ಯ ಹಿರಿಯ ಹಣಕಾಸು ನಿಯಂತ್ರಕರು ಅಬ್ದುಲ್ಲಾ ಮದುಮೂಲೆ ಇವರಿಗೆ ಗಡಿನಾಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ

4.30 ರಿಂದ 5.00 ರವರೆಗೆ ನೃತ್ಯ ವೈವಿಧ್ಯ, 5.00ರಿಂದ 5.45 ರವರೆಗೆ ಸುಗಮ ಸಂಗೀತ, 5.45 ರಿಂದ 6.00 ರವರೆಗೆ ಪಿಲಿ ನಲಿಕೆ, 6.00 ರಿಂದ 7.00 ರವರೆಗೆ ಡಾಫ್, ಕೊಲ್ಕಲಿ, ಒಪ್ಪಣ, ಮಾಪಿಲಪಟ್ಟು ಮತ್ತು 8.30 ರಿಂದ 9.30 ರವರೆಗೆ ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು