ದುಬೈ: ದಾರುನ್ನೂರು ಕಲ್ಚರ್ ಸೆಂಟರ್ ಯು.ಎ.ಇ. ಅಧೀನದಲ್ಲಿ ನಡೆದ ಮೆಹಫೀಲ್ ಎ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ದಾರುನ್ನೂರು ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ನಿರ್ದೇಶಕರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರನ್ನು ದುಬೈಯಲ್ಲಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಸಲಹೆಗಾರರಾದ ಬಹು ಸಿರಾಜುದ್ದೀನ್ ಫೈಝಿ ಬಂಟ್ವಾಳ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ಅಬ್ದುಸಲಾಂ ಬಾಖವಿರವರು ದಿಕ್ಸೂಚಿ ಭಾಷಣ ಮಾಡಿದರು.
ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಅನಿವಾಸಿ ಹಲವಾರು ಸಂಘ ಸಂಸ್ಥೆಗಳ ನೇತಾರರು ದಾರುನ್ನೂರು ಇದರ ಪ್ರಧಾನ ಪೋಷಕರು ಯು ಎ ಇ ಸರಕಾರ ನೀಡುತ್ತಿರುವ ಗೋಲ್ಡನ್ ವೀಸಾ ಪಡೆದಿರುವ ಯೂಸುಫ್ ಈಶ್ವರ ಮಂಗಿಲರವರನ್ನು ದಾರುನ್ನೂರ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ದಾರುನ್ನೂರ್ ಯುಎಇ ಸಮಿತಿ ಪ್ರಧಾನ ಸಲಹೆಗಾರರು ಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ಅಬ್ದುಸಲಾಂ ಬಾಖವಿರವರನ್ನು ಇದೆ ಸಂಧರ್ಭದಲ್ಲಿ ದಾರುನ್ನೂರು ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಾರುನ್ನೂರು ಯು.ಎ.ಇ ಸಮಿತಿಯ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಮಾಡವು, ಪ್ರಧಾನ ಕಾರ್ಯದರ್ಶಿ ಹಾಜಿ ಬದ್ರುದ್ಧೀನ್ ಹೆಂತಾರ್, ನಿಕಟಪೂರ್ವ ಅಧ್ಯಕ್ಷರಾದ ಶಂಸುದ್ದೀನ್ ಸೂರಲ್ಪಾಡಿ, ಗೌರವಧ್ಯಕ್ಷರಾದ ಮುಸ್ತಫಾ ಕದ್ರಿ, ಮೊಹಮ್ಮದ್ ಆಸೀಫ್ ಮಸೂದ್, ಕೋಶಾಧಿಕಾರಿಯಾದ ಅಬ್ದುಸಲಾಂ ಬಪ್ಪಳಿಗೆ, ದುಬೈ ಘಟಕದ ಅಧ್ಯಕ್ಷರಾದ ಇಲ್ಯಾಸ್, ಹಾಜಿ ಯೂಸುಫ್ ಬೆರಿಕೆ , ಅಬೂಧಾಬಿ ಘಟಕದ ಅಧ್ಯಕ್ಷರಾದ ಅಬ್ದುಲ್ ರೌಫ್ ಹಾಜಿ ಕೈಕಂಬ , ಮತ್ತು ಶಾರ್ಜಾ ಘಟಕದ ಅಧ್ಯಕ್ಷರಾದ ಅಶ್ರಫ್ ಬಾಳೆಹೊನ್ನೂರ್ , ಅಬ್ದುಲ್ಲಾ ಮದುಮೂಲೆ , ಯೂಸುಫ್ ಈಶ್ವರಮಂಗಿಲ , ಷರೀಫ್ ಕಾವು , ರಹ್ಮಾನ್ ಸಜಿಪ , ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಬೀರ್ ಫರಂಗಿಪೇಟೆ ವಂದಿಸಿ ನೂರ್ ಮುಹಮ್ಮದ್ ನೀರ್ಕಜೆ ನಿರೂಪಿಸಿದರು.