ಬೆಂಗಳೂರು: ಗರುಡ ಗಮನ ವೃಷಭ ವಾಹನದ ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಮೂರನೇ ಯೋಜನೆ ಬಗ್ಗೆ ಸಧ್ಯದಲ್ಲೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಎರಡನೇ ಯೋಜನೆ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ಮುಗಿಸಿದ್ದಾರೆ. ಮೂರನೇ ಪ್ರಾಜೆಕ್ಟ್ ಗೆ ಟೋಬಿ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ.
ಈ ಸಿನಿಮಾವನ್ನು ರಾಜ್ ದೂಡ್ಡ ಮೊತ್ತ ಹೂಡಿ ಮಾಡುತ್ತಿದ್ದಾರೆ. ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಮೂಲಕ 16 ಕೋಟಿ ಬಂಡವಾಳ ವ್ಯಯಿಸುವ ಯೋಜನೆ ಮಾಡಿದ್ದಾರೆ ಎನ್ನಲಾಗಿದೆ. ಸ್ವಾತಿ ಮುತ್ತಿನ ಪ್ರೇಮ ಕಥೆಯ ನಂತರ ಮತ್ತೆ ರೌಡಿಸಂ ಕಥೆ ಹೆಣೆದಿದ್ದಾರ ಎಂಬ ಪ್ರಶ್ನೆ ಇದೆ.
“ತಂತ್ರಜ್ಞ ಮತ್ತು ಕಲಾವಿದನಾಗಿ ನನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿದ ಚಿತ್ರ ಇದಾಗಿದೆ. ಶೀಘ್ರದಲ್ಲೇ ಈ ಯೋಜನೆಯ ಕುರಿತು ಇನ್ನಷ್ಟು ಹಂಚಿಕೊಳ್ಳುತ್ತೇನೆ. ಆದರೆ ಇದುವರೆಗಿನ ನಮ್ಮ ಕೆಲಸದಲ್ಲಿ ಇದು ಅತ್ಯುತ್ತಮವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ರಾಜ್ ಬಿ ಟ್ವಿಟರ್ ಬರೆದುಕೊಂಡಿದ್ದಾರೆ.
ಟೋಬಿಯ ಬಗ್ಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದೆ ಹೀಗಾಗಿ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಮಾರಾಟ ಆಗಿದೆಯಂತೆ. ಸಂಯುಕ್ತಾ ಹೊರನಾಡು ಹಾಗೂ ಗಾಯಕಿ ಕಮ್ ನಟಿ ಚೈತ್ರಾ ಆಚಾರ್ ರಾಜ್ ಇದರಲ್ಲಿ ಜೋಡಿಯಾಗಲಿದ್ದಾರೆ. ರಾಜ್ ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅಲ್ಲದೇ ಮಲಯಾಳಂ ಚಿತ್ರ ಒಂದರಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಕಾಂತಾರ 2 ರಲ್ಲೂ ರಿಷಬ್ ಸಾಥ್ ಕೊಡಲಿದ್ದಾರೆ.