ಬೆಂಗಳೂರು: ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ, ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮೀಯ ಚಿತ್ರ ‘ಗಂಧದಗುಡಿ – ಜರ್ನಿ ಆಫ್ ಎ ಟ್ರೂ ಹೀರೋ’ ಅವರ ಜನ್ಮದಿನವಾದ ಮಾರ್ಚ್ 17 ರಂದು ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ-ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಅವರು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಿಸಿದ್ದರು.
ದಿವಂಗತ ನಟ ಪುನೀತ್ ಅವರ 48 ನೇ ಜನ್ಮದಿನದಂದು, ‘ಗಂಧದಗುಡಿ – ಜರ್ನಿ ಆಫ್ ಎ ಟ್ರೂ ಹೀರೋ’ ಪ್ರಕೃತಿ ಮತ್ತು ಅವರ ಮಾತೃಭೂಮಿಯ ಮೇಲಿನ ಪ್ರೀತಿ ಕುರುಹಾಗಿ ಪ್ರದರ್ಶನಗೊಳ್ಳಲಿದೆ.
ವನ್ಯಜೀವಿಗಳು, ಜಲಮೂಲಗಳಿಗೆ ವಿಶೇಷ ಕ್ಷಣಗಳನ್ನು ಸೆರೆಹಿಡಿಯಲು ಪವರ್ ಸ್ಟಾರ್ ನಟ ಮತ್ತು ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಕರ್ನಾಟಕಕ್ಕೆ ಪ್ರವಾಸ ಕೈಗೊಂಡರು. ಇವರಿಬ್ಬರು ಪ್ಲಾಸ್ಟಿಕ್ ಕಡಿವಾಣ, ನೀರಿನ ಸಂರಕ್ಷಣೆ ಮತ್ತು ಅರಣ್ಯನಾಶದ ಸುತ್ತಲಿನ ಪರಿಸರ ಕಾಳಜಿ ಕುರಿತು ಚಿತ್ರದಲ್ಲಿ ಅಮೋಘವಾಗಿ ವಿವರಿಸಿದ್ದಾರೆ.
ಪ್ರೈಮ್ ವಿಡಿಯೋದಲ್ಲಿ ಗಂಧದಗುಡಿ ಸ್ಟ್ರೀಮಿಂಗ್ ಪ್ರೀಮಿಯರ್ ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್, “ಈ ಚಿತ್ರವು ಅಪ್ಪು ಅವರ ಕನಸಿನ ಯೋಜನೆಯಾಗಿತ್ತು ಮತ್ತು ಅವರು ಪರಿಸರ ಸಂರಕ್ಷಣೆ ತುಡಿತವಿತ್ತು ಈ ಚಿತ್ರಕ್ಕೆ ಕರ್ನಾಟಕದ ಅಪ್ಪು ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರಿಂದ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ತಿಳಿಸಿದ್ದಾರೆ.
ಅವರ ಜನ್ಮದಿನದಂದು ದೇಶಾದ್ಯಂತ ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಪ್ರೈಮ್ ವೀಡಿಯೊ ಮೂಲಕ ಚಿತ್ರ ತಲುಪಲಿದೆ ಎಂದರು.
ನಿರ್ದೇಶಕ ಅಮೋಘವರ್ಷ ಮಾತನಾಡಿ, “ಗಂಧದಗುಡಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಕೃತಿಯ ಬಗ್ಗೆ ಅಪ್ಪು ಕಾಳಜಿ ಅಪಾರ. ಈ ನಿಟ್ಟಿನಲ್ಲಿ ಚಿತ್ರ ಪ್ರೇರಣಾದಾಯಿ ಎಂದರು.