ಪೈಪೆರೇಸಿ ಕುಟುಂಬಕ್ಕೆ ಸೇರಿದ ಕರಿಮೆಣಸು ಅಥವಾ ಕಾಳುಮೆಣಸು ಭಾರತದ ಅತ್ಯಂತ ಉತ್ತಮ ಮಸಾಲೆ ಪದಾರ್ಥಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸ್ಪಡುವ ಕಾಳು ಮೆಣಸು ಔಷಧದಲ್ಲಿಯೂ ಬಳಸುತ್ತಾರೆ. ಆರಂಭಿಕ ಐತಿಹಾಸಿಕ ಕಾಲದಲ್ಲಿ ಆಗ್ನೇಯ ಏಷ್ಯಾದ ಉಷ್ಣವಲಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಈ ಕಾಳುಮೆಣಸು ಭಾರತ ಮತ್ತು ಯೂರೋಪ್ ಖಂಡದ ನಡುವೆ ಇಂದು ಉತ್ತಮ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸಿತ್ತು.
ಕಾಳುಮೆಣಸನ್ನು ಹೆಚ್ಚಾಗಿ ಮಿಶ್ರ ಕೃಷಿಯಾಗಿ ಅಡಿಕೆ ಕೃಷಿಯ ಜೊತೆ ಬೆಳೆಸಲಾಗುತ್ತದೆ. ಬಳ್ಳಿಯ ಮೂಲಕ ಬೆಳೆಯುವ ಕಾಳುಮೆಣಸಿಗೆ ಅಡಿಕೆ ಮರವು ಒಂದು ಉತ್ತಮ ಆಧಾರವಾಗಿ ನಿಲ್ಲುತ್ತದೆ. ಇದರಿಂದಾಗಿ ಕಾಳುಮೆಣಸಿನ ಕೃಷಿಗೆ ವಿಶೇಷವಾಗಿ ಚಪ್ಪರದ ಅವಶ್ಯಕತೆ ಇರುವುದಿಲ್ಲ.
ಕಾಳುಮೆಣಸಿನ ಗಿಡದ ರಚನೆ: ಕಾಳುಮೆಣಸಿನ ಗಿಡವು ೩೩ಅಡಿಎತ್ತರ ಬೆಳೆಯುತ್ತದೆ. ಅಗಲವಾದ ಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು ಸಣ್ಣ ಹೂಗಳು ಬೆಳೆದು ಪ್ರೌಢಾವಸ್ಥೆಗೆ ಬಂದಾಗ ಹಳದಿ ಕೆಂಪು ಬಣ್ಣಕ್ಕೆ ತಿರುಗುತ್ತವೆ ಇವುಗಳನ್ನು ನಂತರ ಇವುಗಳು ಹಸಿರುಬಣ್ಣಕ್ಕೆ ತಿರುಗುವಾಗ ಇವುಗಳ ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡಿದ ಕಾಳುಮೆಣಸನ್ನು ಅವುಗಳ ತೊಗಟೆಗಳಿಂದ ಬೇರೆ ಮಾಡಿ ಬಿಸಿಲಿನಲ್ಲಿ ಸರಿಯಾಗಿ ಒಣಗಿಸಬೇಕಾಗುತ್ತದೆ. ಸರಿಯಾದ ಬಿಲಿಸಿಲದ್ದಲ್ಲಿ ೪ ರಿಂದ ೫ ಬಿಸಿಲು ಸಾಕಾಗುತ್ತದೆ.
ಈ ಸಸ್ಯಕ್ಕೆ ದೀರ್ಘ ಮಳೆಗಾಲ, ಸಾಕಷ್ಟು ಹೆಚ್ಚಿನ ತಾಪಮಾನ ಮತ್ತು ಉತ್ತಮ ನೆರಳಿನ ಅವಶ್ಯಕತೆ ಬೇಕಾಗುತ್ತದೆ.
ವೈವಿಧ್ಯಮಯ ತಳಿಗಳು: ಕರಿಮೆಣಸು, ಬಿಳಿಮೆಣಸು, ಹಸಿರುಮೆಣಸು, ಕೆಂಪು ಮೆಣಸು, ಪಿಂಕ್ ಪೆಪ್ಪರ್ ಕಾರ್ನ್.
ಮಣ್ಣು ಮತ್ತುಹವಾಮಾನ: ಕಾಳುಮೆಣಸು ಮುಖ್ಯವಾಗಿ ಮಳೆಯಾಶ್ರಿಯ ಬೆಳೆಯಾಗಿ ಬೆಳೆಯಲಾಗುತ್ತೆದೆ. ಇದಕ್ಕೆ ಅಧಿಕ ಆರ್ದ್ರರೆ ಮತ್ತು ಬೆಚ್ಚನೆಯ ವಾತಾವರಣ ಬೇಕಾಗುತ್ತದೆ. ಸಮೃದ್ಧವಾಗಿರುವ ಕಚ್ಚಾಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಹುದು.
ಇಳುವರಿ: ಕಾಳುಮೆಣಸು ಬಳ್ಳಿಗಳು ಸಾಮಾನ್ಯವಾಗಿ ೩ಅಥವಾ ೪ನೇ ವರ್ಷದಿಂದ ಇಳುವರಿಯನ್ನು ಪ್ರಾರಂಭಿಸುತ್ತದೆ. ಹೂಬಿಡುವುದರಿಂದ ಹಿಡಿದು ಹಣ್ಣಾಗುವವರೆಗೂ ೬ ರಿಂದ ೮ ತಿಂಗಳು ಬೇಕುತ್ತದೆ.
ಆರೋಗ್ಯ: ಕಾಳುಮೆಣಸಿನಿಂದ ನಮ್ಮ ದೆಹಕ್ಕೆ ಹಲವಾರು ಪ್ರಯೋಜನಗಳಿವೆ ಈ ಅದ್ಬುತ ಮಸಾಲೆಯ ಕೆಲವು ಉತ್ತಮ ಸಂಗತಿಗಳು ಇಲ್ಲಿವೆ.
• ದೇಹದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ
• ಕ್ಯಾನ್ಸರ್ ತಡೆಗಟ್ಟುತ್ತದೆ
• ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ
• ಮಲಬದ್ದತೆಯನ್ನು ತಡೆಯುತ್ತದೆ
• ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ
ನಮ್ಮ ದೈನಂದಿನ ಆಹಾರದಲ್ಲಿ ಒಂದು ಚಿಕಟಿಕೆ ಕಾಳುಮೆಣಸು ಸೇರಿಸುವುದರಿಂದ ಆರೋಗ್ಯವಾಗಿರಬಹುದು.