News Karnataka Kannada
Monday, May 13 2024
ಲೇಖನ

ವರದಕ್ಷಿಣೆ ಹೋಯಿತು ಈಗ ವಧುದಕ್ಷಿಣೆ

ವರದಕ್ಷಿಣ ಕಿರುಕುಳ ದೂರು
Photo Credit : Freepik

ಪೋಷಕರು ನನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದೇವೆ, ಅವಳು ಉದ್ಯೋಗದಲ್ಲಿದ್ದಾಳೆ. ಹಾಗಾಗಿ ವರದಕ್ಷಿಣೆ ಕೊಡುವುದಿಲ್ಲ ಎಂದು ವಧುವಿನ ಕಡೆ ಇನ್ನೂ ಹಲವಾರು ಪೋಷಕರು ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇನ್ನೂ ಚಿಕ್ಕ ವಯಸ್ಸು. ಹಾಗೆ ನಾನು ಮದುವೆ ಮಾಡುವ ಮಟ್ಟದಲ್ಲಿ ಇಲ್ಲ ಸಾಲ ಇದೆ ಎಂಬ ನೆಪ ಪೋಷಕರು ಖಡಾ ಖಂಡಿತವಾಗಿ ಹೇಳುವುದು, ಇದಕ್ಕೆ ವರನ ಕಡೆಯವರು ಒಪ್ಪುವುದು ಬದಲಾದ ಕಾಲಘಟ್ಟ ಹಾಗೂ ಮನಸ್ಥಿತಿಯ ಸಕಾರಾತ್ಮಕ ಬೆಳವಣಿಗೆಯಾಗಿದೆ ಆದರೆ ಉದ್ಯೋಗದಲ್ಲಿರುವ ಹುಡುಗ ಹುಡುಗಿಯ ತಂದೆ ತಾಯಿ ದುಡ್ಡಿನಲ್ಲೇ ಮದುವೆ ಮಾಡಿಕೊಳ್ಳುವ ತಂದೆತಾಯಿಯರು ಸಾಮಾಜಿಕ ಹಾಗೂ ಆರ್ಥಿಕ ವರ್ಚಸ್ಸಿಗಾಗಿ ಮಕ್ಕಳ ಮದುವೆಯನ್ನು ತಮ್ಮ ಖರ್ಚಿನಲ್ಲಿಯೇ ಅದ್ಧೂರಿಯಾಗಿ ನೆರವೇರಿಸುವ ಪದ್ಧತಿ ಇದೆ.

ಇದರ ಮಧ್ಯೆಯೂ ದುಡಿಯುವ ಹುಡುಗ, ಅವರ ಪೋಷಕರು ಮದುವೆ ಖರ್ಚು ನೋಡಿಕೊಳ್ಳುವ ಮದುವೆಗೆ ಆದ ಒಟ್ಟು ಖರ್ಚಿನಲ್ಲಿ ಇಬ್ಬರೂ ಹಂಚಿಕೊಳ್ಳುವ ಒಪ್ಪಂದದ ಮದುವೆ ಆಗಿರುತ್ತದೆ. ನಗರ ಜೀವನ ಶೈಲಿಗೆ ಹೆಚ್ಚಿನ ಜನ ಮಾರು ಹೋಗುತ್ತಿರುವುದರಿಂದ ನಗರಗಳಲ್ಲಿ ವಾಸಿಸುವ ಯುವಕ ಯುವತಿಯರಿಗೆ ಉತ್ತಮ ಸಂಬಳವೂ ಸಿಗುವುದರಿಂದ ಸ್ವಯಂ ಖರ್ಚಿನಲ್ಲೇ ಮದುವೆಯ ಆಗುವ ಸಾಧ್ಯತೆಗಳಿವೆ. ಪ್ರೀತಿಸಿ ಮದುವೆಯಾಗಿ ಮೂವರು ಮನೆಯಲ್ಲಿ ಹಿರಿಯರು ನೋಡಿದವರನ್ನು ಮದುವೆಯಾಗುವವರು ನವವಿವಾಹ ಪದ್ದತಿ ಅನುಸರಿಸಬಹುದಾಗಿದೆ.

ಇದಕ್ಕೆ ಒಂದಷ್ಟು ಸವಾಲುಗಳು ಎದುರಾದರೂ ಅವುಗಳನ್ನು ಮೆಟ್ಟಿ ನಿಲ್ಲಬಹುದಾದರೂ ಕಾರಣ ಯುವಕ ಯುವತಿಯರು ಇಂತಹ ಮದುವೆ ಪದ್ಧತಿಗಳ ಮೊರೆ ಹೋಗಬಹುದಾಗಿದೆ ಹಾಗೂ ಇದು ಮಾದರಿಯ ನೆದೆಯೂ ಆಗಿದೆ. ಹಾಗಾದರೆ ಏನಿದು ಒಪ್ಪಂದದ ಮದುವೆ? ಆಧುನಿಕ ಜೀವನ ಶೈಲಿಯಲ್ಲಿ ಇಂತಹ ಮದುವೆ ಸಾಧ್ಯವೇ? ಪೋಷಕರಲ್ಲಿ ಆಗಬೇಕಾದ ಬದಲಾವಣೆಗಳೇನು? ಇದರಿಂದ ಸಮಾಜದ ಮೇಲೆ ಬೀರುವ ಸಕಾರಾತ್ಮಕ ಬದಲಾವಣೆ ಏನು? ಎಂಬುದು ಕುತೂಹಲಕಾರಿ ಅಂಶ.

ಭಾರತದಲ್ಲಿ ಮದುವೆ ಎಂದರೆ ಅದು ಕೇವಲ ಹುಡುಗ ಹುಡುಗಿ ದಾಂಪತ್ಯ ಜೀವನಕ್ಕೆ ಅದು ಪೋಷಕರಿಗೆ ಶ್ರೀಮಂತಿಕೆ ಪ್ರದರ್ಶಿಸುವ, ತಮಗಿರುವ ಸಾಮಾಜಿಕ ಸಂಪರ್ಕ, ಗಣ್ಯರ ಜೊತೆಗಿನ ಒಡನಾಟ ಪ್ರದರ್ಶಿಸುವ ವೇದಿಕೆ. ಹಾಗಾಗಿಯೇ ಪೋಷಕರು ಅದ್ದೂರಿ ವಿವಾಹಗಳಿಗೆ ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಸಾಲ ಮಾಡುತ್ತಾರೆ. ಇಂತಹ ಮನಸ್ಥಿತಿಯಿಂದಾಗಿಯೇ ಮಕ್ಕಳ ಮದುವೆಗಾಗಿ ಹಣ ಖರ್ಚು ಮಾಡಲು ಬಿಡುವುದಿಲ್ಲ. ದುಬಾರಿ ಚಕ್ರಗಳು, ಅದ್ದೂರಿ ವೇದಿಕೆಗಳು, ಐಷಾರಾಮಿ ಉಡುಗೊರೆಗಳು ಮದುವೆಯಲ್ಲಿ ಕಂಗೊಳಿಸುತ್ತವೆ. ಇದರಿಂದಾಗಿ ಹೆಚ್ಚಿನ ಯುವಕ ಯುವತಿಯರು ಅನಿವಾರ್ಯಕ್ಕೆ ಸಿಲುಕಿ ತಂದೆ ತಾಯಿ ಚಿಂತೆ ಹೋಗಿಸಲು ಮದುವೆಯಾಗುತ್ತಾರೆ. ಆದರೆ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದು ಸ್ವಾವಲಂಬಿಯಾಗಿರುವ ಮಕ್ಕಳು ಅವರ ಇಚ್ಛೆಯಂತೆ ಅವರ ಆಯ್ಕೆಯಂತೆ ಅವರ ಖರ್ಚಿನಲ್ಲೇ ಮದುವೆಯಾಗಲು ಪೋಷಕರು ಸಹ ಅನುವು ಮಾಡಿಕೊಡಬೇಕಾಗಿದೆ.

ಎಷ್ಟು ಮಕ್ಕಳು ಅಂತರ್ಜಾತಿ ವರನನ್ನು ಹುಡುಕಿ ಕೊಂಡು ಪ್ರೀತಿಸಿ ಮದುವೆಯಾಗುತ್ತಾರೆ, ಪ್ರೀತಿಸಿ ಮದುವೆಯಾಗಿ ಅಲ್ಲೂ ಕೂಡ ಜೀವನ ಸಾಧಿಸದೆ ಎಷ್ಟೋ ಪ್ರೇಮಿಗಳು ಹಣದ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಷ್ಟೋ ಪೋಷಕರು ಪ್ರೀತಿಸಿ ಮದುವೆಯಾದರೆ ಅದನ್ನೇ ಸವಾಲಾಗಿ ತೆಗೆದುಕೊಂಡು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ತಮ್ಮ ಕನಸುಗಳನ್ನು ಮುಚ್ಚಿಟ್ಟು ನಮಗಾಗಿ ಜೀವನ ಸವೆಸಿದ ಪೋಷಕರಿಗೆ ಮದುವೆಯ ಹೊರೆಯನ್ನು ಹೊರಿಸುವುದು ಎಷ್ಟು ಸರಿ? ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಂಡು ಕೈತುಂಬ ಸಂಬಳ ಎಣಿಸುವ ನಮ್ಮ ಹಣದಲ್ಲಿ ಬೈಕು, ಮೊಬೈಲ್ ಖರೀದಿಸಲು ಸಾಮರ್ಥ್ಯ ಇರುವಾಗ ಮದುವೆಗೆ ತಂದೆ ತಾಯಿ ಬಳಿ ಏಕೆ ಕೈ ಚಾಚಬೇಕು ಎಂಬ ಪ್ರಶ್ನೆ ಕೇಳಿಕೊಂಡರೆ ಒಳ್ಳೆಯದು.

ಮಕ್ಕಳ ಮದುವೆಗೆ ಎಲ್ಲ ಪೋಷಕರು ಹಣ ಕೂಡಿಡುತ್ತಾರೆ ಎಂಬುದು ಎಷ್ಟು ನಿಜವೋ ಮಕ್ಕಳ ಮದುವೆಯ ನಂತರ ಅವರ ನಿವೃತ್ತಿ ಜೀವನಕ್ಕೆ ಹಣ ಇರುವುದಿಲ್ಲ ಅಥವಾ ತೊಂದರೆ ಆಗುತ್ತದೆ ಎಂಬುದು ಅಷ್ಟೇ ನಿಜ. ತಂದೆ ತಾಯಿ ಎಷ್ಟೇ ಶ್ರೀಮಂತರಾದರೂ ನಮ್ಮ ಖರ್ಚಿನಲ್ಲಿಯೇ ಮದುವೆಯಾದವು ಎಂಬ ಸಾರ್ಥಕ ಭಾವ ಕೊನೆಯವರೆಗೂ ಇರುತ್ತದೆ ಎಂಬುದನ್ನು ಸಹ ಯುವಕ ಯುವತಿಯರು ತಿಳಿದುಕೊಳ್ಳಬೇಕಾದ ಸಂಗತಿ.

– ಮಣಿಕಂಠ ತ್ರಿಶಂಕರ್ , ಮೈಸೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು