ಅಲಿಯಮ್ ಸ್ಯಾಟಿವಮ್ ಅಲಿಯೇಸಿ ಎಂಬ ಕುಟುಂಬಕ್ಕೆ ಸೇರಿದ ಬೆಳ್ಳುಳ್ಳಿ ಭಾರತದ ಮೂಲಕ ಒಂದು ಉತ್ತಮ ಮಸಾಲೆಯಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಉತ್ತರಪ್ರದೇಶವ, ಮದ್ರಾಸ್, ಮತ್ತು ಗುಜರಾತ್ನಲ್ಲಿ ಬೆಳೆಸಲಾಗುತ್ತದೆ. ಮುಖ್ಯವಾಗಿ ಬೆಳ್ಳುಳ್ಳಿ ಕೆಲವು ಸಂಯಕ್ತಗಳು ಹೃದಯದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಪ್ರಯೋಗಗಳು ತೋರಿಸಿವೆ.
ಬೆಳ್ಳುಳ್ಳಿ ಬೆಳೆಗೆ ಉತ್ತಮ ಮಣ್ಣು: ಬೆಳ್ಳುಳ್ಳಿಯನ್ನು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಅದಾಗಿಯೂ ಮರಳು, ಜೇಡಿಮಣ್ಣನ್ನು ಉತ್ತಮವಾಗಿದೆ. ಮಣ್ಣು ಫಲವತ್ತಾಗಿರಬೇಕು, ಸಾವಯವ ಪದಾರ್ಥಗಳು ಸಮೃದ್ಧವಾಗಿರಬೇಕು. ಹಾಗೂ ಬೆಳೆಯ ಅವಧಿಯಲ್ಲಿ ಸಾಕಷ್ಟು ತೇವಾಂಶ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.
ಬೆಳ್ಳುಳಿ ನಾಟಿ ವಿಧಾನ: ಬೆಳ್ಳುಳಿ ಬೇಸಾಯದಲ್ಲಿ ಬೆಳ್ಳುಳಿ ನಾಟಿ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಬದಲಾಗುತ್ತದೆ.ಮಳೆಯಾಶ್ರಿಂತ ಮಲೆನಾಡಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಾಟಿ ಮಾಡಲಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ಅಕ್ಟೋಬರ್ ನಿಂದ ನವೆಂಬರ್ ವರೆಗೆ ನಾಟಿ ಮಾಡಲಾಗುತ್ತದೆ.
೨ ರಿಂದ ೩ ಸೇ.ಮಿ ಆಳದಲ್ಲಿ ಬೆಳ್ಳುಳಿಯನ್ನು ಬೆಳೆಯಲಾಗುತ್ತದೆ. ಗಿಡಗಳ ನೆಟ್ಟ ಅಂತರವು ೧೫- ೧೫ ಸೆ.ಮಿ ವರೆಗೆ ಬದಲಾಗುತ್ತದೆ.
ಬಿತ್ತನೆಯ ಮಾಡಿದ ಒಂದು ತಿಂಗಳ ನಂತರ ಕಳೆ ಕೀಳಬೇಕಾಗುತ್ತದೆ. ಇಲ್ಲವಾದಲ್ಲಿ ಗಿಡಗಳಿಗೆ ಬೇಕಾದ ಪೋಶಕಾಂಶ ಸಿಗುವುದಿಲ್ಲ. ನಾಟಿ ಮಾಡಲು ತಯಾರಿ ಮಾಡುವಾಗ ಮಣ್ಣಿನ ತೇವಾಂಶವು ಸಾಕಷ್ಟಿಲ್ಲದಿದ್ದರೆ ಒಂದು ಅಥವಾ ಎರಡು ದಿನಗಳ ಮೊದಲು ಹೊಲವನ್ನು ನೀರಾವರಿ ಮಾಡುವುದು ಅವಶ್ಯಕ. ಮರಳು ಮಿಶ್ರಿತ ಮಣ್ಣಿಗೆ ಆಗಾಗೆ ನೀರಿನ ಅವಶ್ಯಕತೆ ಇರುತ್ತದೆ.
ಬೆಳ್ಳುಳಿಯ ಕೊಯ್ಲು: ಬೆಳ್ಳುಳಿ ೪ರಿಂದ ೫ ತಿಂಗಳ ಬೆಳೆಯಾಗಿದ್ದು ಎಲೆಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ ಮತ್ತು ಒಣಗುವ ಲಕ್ಷಣಗಳು ಕಂಡಾಗ ಬೆಳೆ ಕೊಯ್ಲಿಗೆ ಸಿದ್ದವಾಗಿದೆ ಎಂದರ್ಥ.
ಆರೋಗ್ಯ ಲಾಭಗಳು:
• ಬೆಳ್ಳುಳಿ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
• ಬೆಳ್ಳುಳ್ಳಿ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
• ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
• ಬೆಳ್ಳುಳ್ಳಿ ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯನ್ನು ತಡೆಯಬಹುದು
• ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ.