ದೇಶದ ಇತಿಹಾಸ ತಿಳಿಸುವಂತೆ ಅಂದು ಅನೇಕ ವರ್ಷಗಳ ಕಾಲ ನಮ್ಮನ್ನಾಳಿ ದೇಶದ ಗತವೈಭವದ ಸಕಲ ಸಂಪತ್ತನ್ನು ದೋಚಿ ಸೂರೆಗೈದು ಹೋದ ಬ್ರಿಟಿಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಸಂತೆಪೇಟೆ ರಸ್ತೆಯಲ್ಲಿರುವ ನಗರಸಭೆ ಆವರಣದಲ್ಲಿ ಬ್ರಿಟಿಷರೇ ನೆಟ್ಟು ಬೆಳಸಿ ರಕ್ಷಣೆ ನೀಡಿದ ಮರವು, ಇಂದಿಗೂ ಹಾಗೆ ಇದೆ.
ಹೆಬ್ಬಾವುಗಳ ಸಮೂಹವೇ ಒಂದನ್ನೊಂದು ಸುತ್ತಿ ಅಪ್ಪಿ, ತಬ್ಬಿ ಮುತ್ತಾಡುತ್ತಿರುವಂತೆ ತನ್ನ ಅನೇಕ ಬಾಹುಗಳಿಂದ ಸುಮಾರು ೩೦*೪೦ ಅಂದರೆ ೧೨೦ ಅಡಿ ಸುತ್ತಳತೆಯಲ್ಲಿ ಚಪ್ಪರದಂತೆ ಚಾಚಿ, ಬಾಚಿ ಬೆಳೆದು ನಿಂತ ಈ ದಪ್ಪ ದಪ್ಪ ಬಳ್ಳಿಗಳು ಅಡಿಯಿಂದ ಮುಡಿವರಗೆ ಒಂದನ್ನೊಂದು ಸುತ್ತಿ ಅಮರಿಕೊಂಡಂತೆ ಬೆಳೆದು ನಿಂತು ನೂರಾರು ಹಕ್ಕಿ ಪಕ್ಷಿಗಳಿಗೆ, ಆಶ್ರಯ ನೀಡುವುದೂ ಅಲ್ಲದೆ ಎಂತಹಾ ಬಿಸಿಲಿನ ತಾಪಕ್ಕೆ ಸಿಕ್ಕಿದವರು ಇದರ ಕೆಳಗೆ ಯಾರೇ ಬಂದರೂ ತಂಪಾದ ನೆರಳು ನೀಡುವ ಹಾಗೂ ಅದರ ಮೇಲೆ ಬಿದ್ದ ಮಳೆಯ ನೀರನ್ನು ಕೆಳಗೆ ಬಿಡದೆ ಒತ್ತಾಗಿರುವ ಹಸಿರು ಎಲೆಗಳ ಶುದ್ದ ಆಮ್ಲಜನಕ ನೀಡುವ ದೃಶ್ಯವನ್ನು ಯಾರಾದರೂ ವೀಕ್ಷಿಸಿಸಬಹುದು ಹಾಗೂ ಆಸ್ವಾಧಿಸಬಹುದಾಗಿದೆ.
ಆದರೆ ಅದೇ ಚಪ್ಪರದಲ್ಲಿ ವಾಸವಿರುವ ಹಕ್ಕಿ ಪಕ್ಷಿಗಳು ಹೆಚ್ಚು ಹೆಚ್ಚು ತಮ್ಮ ಮೊಟ್ಟೆ ಮರಿಗಳನ್ನಿಡುವುದರಿಂದ ಆ ಮೊಟ್ಟೆ ತಿನ್ನುವ ಆಸೆಗೆ ಕೆಲ ಹಾವುಗಳು ಹೇಗೋ ಇದರೊಳಗೆ ನುಸುಳಿ ಕೊಂಡಿರುವುದು ಸತ್ಯ ಸಂಗತಿಯೇ ಸರಿ. ಹಾಗೇ ಅದೇ ಕಾಲದಲ್ಲಿಯೇ ನಗರ ಮಧ್ಯಭಾಗದಲ್ಲಿರುವ ಹಾಸನ ಸಿಟಿ ಕ್ಲಬ್ ಆವರಣದಲ್ಲಿಯೂ ಅಂತಹದೇ ಸಸಿ ನೆಟ್ಟು ಬೆಳಸಿದ ಸಂಗತಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಆದಿಕಾಲದಿಂದ ನಗರ ಸಭೆಯವರು ಅದನ್ನು ಇಂದಿನವರೆಗೂ ಉಳಿಸಿಕೊಂಡಿ ಬಂದಿರುವುದು ಸಂತೋಷದ ವಿಷಯವಲ್ಲವೇ?