ಕೋಕೋ ಮ್ಯೂಸಿಫೆರ ಅರೆಸೇಸಿಯ ಕುಟುಂಬಕ್ಕೆ ಸೇರಿದ ತೆಂಗಿನಕಾಯಿ ಬೆಳೆ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಣ್ಣೆ ಸಾಬೂನು ಸೌಂದರ್ಯ ವರ್ಗಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳ ತಯಾರಿ ಕೈಯಲ್ಲಿ ವ್ಯಾಪಕವಾಗಿ ಬಳಸಲಾಗುವ ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಪ್ರಾಮುಖ್ಯತೆ ಹೊರತಾಗಿಯೂ ಅದರ ಸಿಪ್ಪೆಯು ಫೈಬರ್ ನ ಮೂಲವಾಗಿದೆ. ಹಾಗಾಗಿ ಈ ತೆಂಗಿನಕಾಯಿ ಸಿಪ್ಪೆಯು ಸಹ ತೆಂಗಿನಕಾಯಿ ಉದ್ಯಮವನ್ನು ಬೆಂಬಲಿಸುತ್ತದೆ.
ಭಾರತದ ಅತ್ಯಂತ ಬಹು ಕೋಟಿ ವ್ಯವಹಾರವಾಗಿರುವ ಎಳನೀರು ಆರೋಗ್ಯ ಮತ್ತು ನೈರ್ಮಲ್ಯದ ಜೊತೆಗೆ ಬಾಯಾರಿಕೆಯನ್ನು ನೀಗಿಸುವ ಕಲ್ಪವೃಕ್ಷವಾಗಿದೆ. ಜೊತೆಗೆ ಯಾವುದೇ ರಾಸಾಯನಿಕಗಳಿಲ್ಲದ ವರ್ಜಿನ್ ಕೊಬ್ಬರಿ ಎಣ್ಣೆ ವಿಟಮಿನ್ ಖನಿಜ ಮತ್ತು ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿ ತುಂಬಿಕೊಂಡಿದ್ದು ಇದನ್ನು ಎಲ್ಲ ತೈಲಗಳ ತಾಯಿ ಎಂದು ಕರೆಯುತ್ತಾರೆ.
ತೆಂಗಿನ ತೋಟಕ್ಕೆ ಕೃಷಿ ಹವಾಮಾನ ಪರಿಸ್ಥಿತಿಗಳು : ತೆಂಗಿನಕಾಯಿ ವಿಧಾನ ಪರಿಸ್ಥಿತಿಗಳಲ್ಲಿ ಬೆಳೆಯುವುದನ್ನು ಕಂಡು ಕೊಳ್ಳಬಹುದು. ಇದು ಮುಖ್ಯವಾಗಿ 20 ಡಿಗ್ರಿ ಸೆಲ್ಸಿ ಅಕ್ಷಾಂಶಗಳ ನಡುವೆ ಹೆಚ್ಚಾಗಿ ಬೆಳೆಯುವ ಉಷ್ಣವಲಯದ ಸಸ್ಯವಾಗಿದೆ.
ಸೂಕ್ತವಾದ ಮಣ್ಣು: ತಿಂಗಳು ಲೋನಿ ಲ್ಯಾಟರೈಟ್ ಕರಾವಳಿ ಮರಳು ಮೆಕ್ಕಲು,ಜೇಡಿ ಮಣ್ಣು, ಮತ್ತು ಜವುಗು ಪ್ರದೇಶಗಳ ಮಣ್ಣುಗಳಂಥ ವಿವಿಧ ಮಣ್ಣಿನ ಪ್ರಕಾರಗಳಲ್ಲಿ ಬೆಳೆಯಲಾಗುತ್ತದೆ. ಉತ್ತಮ ಬೆಳವಣಿಗೆ ಮತ್ತು ಕಾರ್ಯಕ್ಷಮತೆಗೆ ಸೂಕ್ತವಾದ ಮಣ್ಣಿನ ಪರಿಸ್ಥಿತಿಗಳೆಂದರೆ ಸರಿಯಾದ ಅವಳೆ ಚರಂಡಿ ಉತ್ತಮ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ದಂತಹ ಮಣ್ಣು ಉತ್ತಮವಾಗಿರುತ್ತದೆ.
ಸಾಮಾನ್ಯವಾಗಿ ತೆಂಗಿನಕಾಯಿ 7.5×7.5 ಮೀಟರ್ ಅಂತರದಲ್ಲಿ ಚೌಕಾಕಾರವಾಗಿ ನೆಡಲು ಶಿಫಾರಸು ಮಾಡಲಾಗುತ್ತದೆ. ಇದು ಪ್ರತಿ ಹೆಕ್ಟೇರಿಗೆ 177 ಮರಗಳನ್ನು ನಡೆಯಲ್ಲ ಆಕಾಶ ಕಲ್ಪಿಸುತ್ತದೆ ಅದಾಗಿಯೂ ದೇಶದ ವಿವಿಧ ತೆಂಗು ಬೆಳೆಯುವ ಪ್ರದೇಶಗಳಲ್ಲಿ 7.5 ರಿಂದ 10 ಮೀಟರ್ ಅಂತರದಲ್ಲಿ ನೆಡುವ ಅಭ್ಯಾಸ ಮಾಡಲಾಗುತ್ತದೆ. ತೆಂಗು ಬೇಕಾದಲ್ಲಿ ಅಂತರ, ನೆಟ್ಟ ವ್ಯವಸ್ಥೆ, ಮಣ್ಣಿನ ಪ್ರಕಾರ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ.
ತೆಂಗಿನ ತೋಟಕ್ಕೆ ಉತ್ತಮ ಸೀಜನ್ : ಪೂರ್ವ ಮಾನ್ಸೂನ್ ಮಳೆಯ ಪ್ರಾರಂಭದೊಂದಿಗೆ ಮೇ ತಿಂಗಳಲ್ಲಿ ಸಸಿಗಳನ್ನು ನೆಡುವುದು ಉತ್ತಮ.
ನೀರಾವರಿ ಅವಶ್ಯಕತೆ: ತೆಂಗಿನ ಗಿಡಗಳು ಬೇಸಿಗೆ ನೀರಾವರಿ ಉತ್ತಮವಾಗಿ ಪ್ರತಿಫಲಿಸುತ್ತದೆ. ಪ್ರತಿ ಮರಗಳಿಗೆ ವಾರಕ್ಕೆ 40 ಲೀಟರ್ ಗಳಷ್ಟು ನೀರನ್ನು ನೀಡುವುದರಿಂದ ಕಾಯಿಗಳ ಇಳುವರಿಯನ್ನು 50ರಷ್ಟು ಹೆಚ್ಚಿಸಬಹುದು. ಚಲನೆಯ ಪ್ರದೇಶಗಳ ನೀರಾವರಿಯಲ್ಲಿ ನಾಲ್ಕು ದಿನಕ್ಕೆ ಒಮ್ಮೆ ಒಂದು ಮರಕ್ಕೆ 200 ಲೀಟರ್ ನಷ್ಟು ನೀರು ನೀಡುವುದು ಪ್ರಯೋಜನಕಾರಿ. ಇನ್ನು ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ತಮ್ಮ ನೀರಿನ ಜೊತೆಗೆ ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ನೆಟ್ಟ ಮೊದಲ ವರ್ಷದಿಂದ ನಿಯಮಿತವಾದ ಗೊಬ್ಬರವನ್ನು ನೀಡುವುದು ಕೂಡ ಅತ್ಯಗತ್ಯ.
ತೆಂಗಿನ ತೋಟದಲ್ಲಿ ಅಂತರ ಬೆಳೆ : ತೆಂಗಿನಕಾಯಿ ಬೇಸಾಯದಲ್ಲಿ ತೆಂಗಿನ ತೋಟದಲ್ಲಿ ಮಣ್ಣು ಮತ್ತು ಸೂರ್ಯನ ಬೆಳಕನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಅನಾನಸ್, ಬಾಳೆ, ಗೆಣಸು, ಶೇಂಗಾ, ಮೆಣಸಿನಕಾಯಿ, ಸಿಹಿ ಗೆಣಸು ಮುಂತಾದ ಬೆಳೆಗಳೊಂದಿಗೆ ಅಂತರ ಬೆಳೆಗಳನ್ನಾಗಿ ಅಳವಡಿಸಿಕೊಳ್ಳಬಹುದು. ಜೊತೆಗೆ ನೆರಳನ್ನು ಸಹಿಸಿಕೊಳ್ಳಬಲ್ಲ ಕೋಕೋ ಮೆಣಸು ದಾಲ್ಚಿನ್ನಿ, ಲವಂಗ, ಜಾಯಿಕಾಯಿ ಅಂತ ಬಹುವಾರ್ಷಿಕ ಬೆಳೆಗಳನ್ನು ಅಂತರ ಬೆಳೆಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಬಹುದು.
ತೆಂಗಿನಕಾಯಿ ಆರೋಗ್ಯ ಪ್ರಯೋಜನಗಳು :
# ಬೇಸಿಗೆ ಸಮಯದಲ್ಲಿ ತೆಂಗಿನಕಾಯಿ ನೀರನ್ನು ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ ಹಾಗೆ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುವುದನ್ನು ತಡೆಯುತ್ತಿದೆ.
# ತೆಂಗಿನಕಾಯಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ನೀಡಬಹುದು
# ಮೇದೋಜೀರಕ ಗ್ರಂಥಿ ಮತ್ತು ಕಿಣ್ವಗಳ ವ್ಯವಸ್ಥೆಗಳ ಮೇಲಿನ ಒತ್ತಡಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
# ಮಧುಮೇಹವನ್ನು ನಿಯಂತ್ರಿಸುತ್ತದೆ.
# ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
# ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ