Categories: ಅಂಕಣ

ನಗುವ ಮಾಟಗಾರರಿಂದ ಸದಾ ಎಚ್ಚರವಿರಬೇಕು

ನಾವು ಮತ್ತು ನಮ್ಮ ಕೆಲಸ ಇಷ್ಟೆ ನಮ್ಮ ಬದುಕು. ನಮ್ಮ ಕೆಲಸವೇ ನಮ್ಮಗೆ ಎಲ್ಲ ಅಂದುಕೊಂಡು ಸವೆಯುವ ಜನ ನಮ್ಮ ಸುತ್ತಮುತ್ತ ಇರುತ್ತಾರೆ.

ಆಕೆ ನಗುವ ಮಾಟಗಾತಿ. ತನ್ನ ಒಂದು ನಗೆಯಿಂದಲೇ ಎಲ್ಲರನ್ನು ತನ್ನ ಹತ್ತಿರ ಸೆಳೆಯುವ ಶಕ್ತಿಯುಳ್ಳವಳು ಆಕೆ. ಒಂದು ಪ್ರತಿಷ್ಟಿತ ಸಂಸ್ಥೆಯ ಒಂದು ವಿಭಾಗದ ಮುಖ್ಯಸ್ಥೆ. ಅಲ್ಲಿಗೆ ಒಬ್ಬ ಬಡಪಾಯಿ ಶ್ರಮ ಜೀವಿ ಕೈ ಕೆಳಗೆ ಕೆಲಸ ಮಾಡಲು ಸೇರಿಕೋಳ್ಳುತ್ತಾರೆ. ಯಂಗ್ ಆಂಡ್ ಎರ್ನಜ್ಟಿಕ್ ಆಗಿರುವ ವ್ಯಕ್ತಿಗೆ ತನ್ನ ಪ್ರತಿಭೆಯನ್ನು ಬಳಸಿಕೊಂಡು ಎನಾದರು ಮಾಡಬೇಕೆಂಬ ಕನಸ್ಸು ಕಟ್ಟಿ ಕೊಂಡಿರುತ್ತಾನೆ ಈ ಶ್ರಮ ಜೀವಿ.

ಇದಕ್ಕೆ ತಕ್ಕದಾಗಿ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಾರೆ. ನಮ್ಮ ವಿಭಾಗವು ಬೇಳೆಯಲು ಎನು ಬೇಕು ಕೇಳಿ ಎಲ್ಲವನ್ನು ಮೇಲಾಧೀಕಾರಿಗಳಿಂದ ಕೋಡಿಸುತ್ತೇನೆ ಎನ್ನುತ್ತಾರೆ. ತುಂಬಾನೇ ಆತ್ಮೀಯತೆ, ಆಸಕ್ತಿ ಮತ್ತು ಗೌರವನ್ನು ತೋರಿಸುತ್ತಾರೆ. ಈ ಪರಿಶ್ರಮ ಜೀವಿ ಹೇಳಿದಕ್ಕೆ, ಕೇಳಿದಕ್ಕೆಲ್ಲ ಎಸ್, ಒಕೆ ಹೇಳುವ ಪರಿಪಾಠವಾಗುತ್ತದೆ.

ತನ್ನ ಮೇಲಾಧಿಕಾರಿ ಹೇಳಿದ ಹಾಗೆ ಎಲ್ಲ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದರಲ್ಲಿ ಏನೊ ಒಂದು ಖುಷಿ. ಇತ್ತ ಮುಖ್ಯಸ್ಥರು ಕೂಡ ಹೇಳಿದಕ್ಕೆಲ್ಲ ಹೂಂ ಎನ್ನತ್ತಾರೆ. ಇಲ್ಲಿ ಮುಖ್ಯವಾಗಿ ಮುಖ್ಯಸ್ಥರಿಗೆ ಗೊತ್ತಿರುತ್ತದೆ ಶ್ರಮ ಜೀವಿಯ ಯೋಚನೆಗಳು ಮತ್ತು ಯೋಜನೆಗಳು ತುಂಬಾನೇ ಚೆನ್ನಾಗಿದೆ ಎಂದು. ಇವರ ಶ್ರಮ ಮತ್ತು ಪ್ರತಿಭೆನೇ ಸಂಸ್ಥೆ ಮತ್ತು ವಿಭಾಗ ಬೆಳೆಯಲು ಮುಖ್ಯ ಬಂಡವಾಳ.

ಈ ಬಡಪಾಯಿ ಶ್ರಮ ಜೀವಿಗೂ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಖುಷಿಯಾಗಿರುತ್ತದೆ. ಎಲ್ಲೂ ಸಿಗದ ಅವಕಾಶ ಇಲ್ಲಿ ಸಿಕ್ಕಿದೆ.ಯಾರು ನೀಡದ ಅವಕಾಶ ಇವರು ನೀಡಿದ್ದಾರೆ. ಇವರು ನಮ್ಮ ಮೇಲೆ ತೋರಿಸಿರುವ ವಿಶ್ವಾಸ ನಂಬಿಕೆ ಬದ್ಧನಾಗಿ ಕೆಲಸ ಮಾಡಬೇಕು ಎಂಬ ಜೋಶ್ ನಲ್ಲಿ ತಮ್ಮ ಎಲ್ಲಾ ಪ್ರತಿಭೆಯನ್ನು ಧಾರೆಎರೆಯುತ್ತಾನೆ.

ಎಲ್ಲಾವು ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಒಂದು ಸಣ್ಣ ತಪ್ಪಿಗೆ ಇಲ್ಲಸಲ್ಲದ ಅಪಧನೆಯನು ತಲೆಗೆ ಕಟ್ಟಿ ಕೆಲಸದಿಂದ ದೂರಾಗುವ ಮತ್ತು ಕೈತೊಳೆಯಬೇಕಾಗುತ್ತದೆ. ಇದೆಲ್ಲವು ಮುಖ್ಯಸ್ಥ ಮತ್ತು ಮೇಲಾಧಿಕಾರಿ ತನ್ನ ನಗುವಿನಿಂದಲೇ ಸಾಧಿಸುತ್ತಾರೆ.

ತುಂಬಾನೇ ನಯವಾಗಿ, ಆತ್ಮೀಯವಾಗಿ ಮಾತಾನಾಡುವ ಇವರು ಅಮ್ಮ, ಮಗ ಅಂತ ಕರೆಯುತ್ತಾರೆ. ಇನ್ನು ಕೆಲವರು ನಮ್ಮ ಮೂಲಕ ತಮ್ಮ ಇಚ್ಛೆಯನ್ನು ಈಡೇರಿಸಿ ಕೋಳ್ಳುತ್ತಾರೆ. ತಾವು ಮಾಡಬೇಕೆಂದಿರುವ ಕೆಲಸವನ್ನು ಇನ್ನೋಬ್ಬರ ಮೂಲಕ ಮಾಡಿಸಿ ಕೊನೆಗೆ ನಾನು ಮಾಡಿದ್ದು ಎಂದು ಬಿಗಿಯುತ್ತಾರೆ.

ಜೊತೆಗೆ ತಮ್ಮ ಜೀವನದ ಕೆಲವೊಂದು ಸ್ವರಾಸ್ಯಭರಿತ ವಿಷಯವನ್ನು ಹಂಚಿಕೊಂಡು ಇನ್ನಷ್ಟು ಆತ್ಮೀಯತೆನ್ನು ತೋರುತ್ತಾರೆ. ಆದರೆ ಮುಂದೆ ಒಂದು ದಿನ ಕತ್ತು ಕೊಯ್ಯುವ ಕೆಲಸವನ್ನು ಮಾಡುತ್ತಾರೆ ಅಂತ ಸ್ವಲ್ಪನು ಸುಳಿವು ಸಿಗುವುದಿಲ್ಲ.
ಇಂತವರು ಎಲ್ಲ ಕಡೆ ಸಿಗುತ್ತಾರೆ ಆತ್ಮವಿಶ್ವಾಸ ಕಳೆದು ಕೊಳ್ಳುವ ಮುನ್ನ ಎಚ್ಚರವಾಗಿರಬೇಕು.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago