ಶಿವಮೊಗ್ಗ: ತಿಪ್ಪೆ ಗುಂಡಿಯ ವಿಚಾರದಲ್ಲಿ ಗಲಾಟೆ, ಮಹಿಳೆ ಸಾವು

ಶಿವಮೊಗ್ಗ:  ಅರಳಹಳ್ಳಿ ಗ್ರಾಮದ ತಾಜ್ ಮಸ್ಜೀದ್ ಬೀದಿಯಲ್ಲಿ ನಿವಾಸಿಗಳ ನಡುವೆ ತಿಪ್ಪೆ ಗುಂಡಿಯ ವಿಚಾರದಲ್ಲಿ ಗಲಾಟೆಯಾಗಿದ್ದು ಈ ಗಲಾಟೆಯಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

ಅರಳಹಳ್ಳಿಯಲ್ಲಿ ಫಯಾಜ್ ಅಹ್ಮದ್ ಮತ್ತು ಫೆಮೀದಾ ಭಾನು ದಂಪತಿಗಳಿಗೆ ಊರಿನಲ್ಲಿ ಸ್ತಿರಾಸ್ಥಿಯಿಂದ ಬಂದ ಜಮೀನು ಇದ್ದು ತಮ್ಮ ಜಮೀನಿನಲ್ಲಿಯೇ ಮನೆ, ಹಸುವಿನ‌ಕೊಟ್ಟಿಗೆ ಕಟ್ಟಿಕೊಂಡು ಜೀವನ ನಡೆಸಿದ್ದಾರೆ. 45 ವರ್ಷದಿಂದ ಇಲ್ಲೇ ಬಾಳಿ ಬದುಕುತ್ತಿದ್ದ ದಂಪತಿಗಳಿಗೆ 15 ವರ್ಷದಿಂದ ಈಚೆಗೆ, ಹಿಂಬದಿಯ ಮನೆಯ ಅಹ್ಮದ್ ಅಶ್ರಫ್ ಕುಟುಂಬ ಮನೆಯ ಹಿಂಬದಿಯಲ್ಲಿದ್ದ ತಿಪ್ಪೆ ಗುಂಡಿಯ ವಿಚಾರದಲ್ಲಿ ತಕರಾರು ಇತ್ತು.

ಹಸುವಿನ ಮಲಮೂತ್ರಗಳು ತಮ್ಮ ಜಮೀನಿನಲ್ಲಿಯೇ ಇದ್ದ ತಿಪ್ಪೆಗುಂಡಿಗೆ ಹಾಕುತ್ತಿದ್ದ ಕಾರಣದಿಂದ ಅಶ್ರಫ್ ಈ ಗುಂಡಿಗೆ ಏನೂ ಹಾಕಬೇಡಿ ಸೊಳ್ಳೆ ಮೊದಲಾದ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತೆ ಎಂಬುದು ಅವರ ಅಕ್ಷೇಪವಾಗಿತ್ತು ಎಂದು ಅವರ ಸಹೋದರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೊನ್ನೆ ಇಬ್ಬರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯನ್ನ ಊರಿನ ಹಿರಿಯರು ನಾಳೆ ತೀರ್ಮಾನ ಮಾಡೋಣವೆಂದು ಸೂಚಿಸಿದ್ದರು.

ಆದರೆ ಮರುದಿನವೇ ಫಮೀದಾ ಭಾನು(55) ಜೊತೆ ಅಶ್ರಫ್ ಪತ್ನಿ ನೂರ್ ಸಲ್ಮಾ ಮತ್ತು ತಂಗಿ ಆಸ್ಮಾ ಮೂವರು ಸೇರಿ ಫೆಮೀದಾ ಭಾನು ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದನ್ನ ತಿಳಿದ ಸಹೋದರ ಆಸಿಫುಲ್ಲಾ ಮತ್ತು ಮಗಳು ಫೌಜಿಯಾ ಜಗಳ ಬಿಡಿಸಲು ಬಂದಿದ್ದಾರೆ. ಫೌಜಿಯಾಳನ್ನೂ ಥಳಿಸಿ, ನೂರು ಸಲ್ಮಾ ಕಿವಿಭಾಗದಲ್ಲಿ ಕಚ್ಚಿದ್ದಾರೆ ಎಂದು ಆಸಿಫುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಗಳದಲ್ಲಿ ಸುಸ್ತಾಗಿ ಚರಂಡಿಗೆ ಬಿದ್ದ ಫೆಮೀದಾ ಭಾನು ರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದರು ಅವರ ಸಾವನ್ನ ದೃಢಪಡಿಸಿದ್ದಾರೆ. ಉದ್ದೇಶ ಪೂರಕವಾಗಿ ಸಹೋದರಿಯ ಕೊಲೆ ಮಾಡಲಾಗಿದೆ ಎಂದು ಸಹೀದರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ashika S

Recent Posts

ಹಣ್ಣಕ್ಕೆ ಬೇಡಿಕೆ ಇಟ್ಟು ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ನೀಡಿ ಚಿತ್ರಹಿಂಸೆ

ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…

16 mins ago

ಮಾಜಿ ಸಿಎಂ ಎಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ: ಕಾಂಗ್ರೆಸ್​ ಶಾಸಕ

ಹೆಚ್​ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್​ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…

28 mins ago

ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ

ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…

47 mins ago

ಕ್ರಿಕೆಟ್ ಪಂದ್ಯದ ವೇಳೆ 21 ವರ್ಷದ ಯುವಕನನ್ನು ಥಳಿಸಿ ಹತ್ಯೆ

ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…

48 mins ago

ಬೀದರ್‌ನಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ

ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…

1 hour ago

ಕೈ ತಪ್ಪಿದ ವಿಧಾನಪರಿಷತ್ ಟಿಕೆಟ್: ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾ‌ನ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ…

1 hour ago