ಧಾರವಾಡ : ಶ್ರಾವಣ ಕೊನೆಯ ಸೋಮವಾರದ ಅಂಗವಾಗಿ ವರುಣನ ಆರ್ಭಟದ ನಡುವೆವೂ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ವಿವಿಧ ವಾಧ್ಯ ಮೇಳಗಳಿಂದ ಹಲವು ಭಂಗಿಯ ಕುಣಿತಗಳನ್ನು ನಡೆದವು. ರಥಕ್ಕೂ ಸಹ ಜನರು ವಿಶೇಷ ಪೂಜೆ ಸಲ್ಲಿಸಿ, ಭಯ ಭಕ್ತಿ ಭಾವದಿಂದ ಭಕ್ತಿ ಸೇವೆ ಸಮರ್ಪಣೆ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳ್ಳಿಗೆಯಿಂದಲೇ ಜನರು ದೇವಸ್ಥಾನಕ್ಕೆ ಆಗಮಿಸಿ ಉಳವಿ ಚೆನ್ನ ಬಸವೇಶ್ವರ ದರ್ಶನ ಪಡೆಯಲು ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದ್ದು, ಭಯ ಭಕ್ತಿ ಭಾವದಿಂದ ದೇವರ ನಾಮ ಸ್ಮರಣೆ ಮಾಡುತ್ತಾ ಜನರು ಉಳವಿ ಚೆನ್ನ ಬಸವೇಶ್ವರ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಉಳವಿ ಚೆನ್ನ ಬಸವೇಶ್ವರಿಗೆ ಜೈಕಾರ ಹಾಕಿ, ಮಹಾಪ್ರಸಾದ ಸ್ವೀಕರಿಸಿ ಪುನೀತರಾದರು.